vijayanagara

ವಾಯವ್ಯ ಪದವೀಧರರ ಚುನಾವಣೆಗೆ ಹನಮಂತ ನಿರಾಣಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷನ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಹನಮಂತ ನಿರಾಣಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ನಾವಣಾಧಿಕಾರಿ ವಿ. ಪಾಟೀಲ ಅವರಿಗೆ 2 ಸೆಟ್ ನಾಮಪತ್ರಗಳನ್ನು ಶುಕ್ರವಾರ ಸಲ್ಲಿಸಿದರು. ಮನೆಗೆ ರಾಜ್ಯಸಭಾ ಸದಸ್ಯ ಆದ ಕರಾಡಿ, ಮುಖದ ಆರ್.ಎಸ್. ಮುತಾಲಿಕ್, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಮೊದಲಾದವರು ಸಾಥ್ಪ ಕ್ಷದ ನಾಯಕರು ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ಬಿಜೆಪಿ …

ವಾಯವ್ಯ ಪದವೀಧರರ ಚುನಾವಣೆಗೆ ಹನಮಂತ ನಿರಾಣಿ ನಾಮಪತ್ರ ಸಲ್ಲಿಕೆ Read More »

ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಸಂಗಾಪುರ ಗ್ರಾಮದಲ್ಲಿ ಇಂದು ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು ಯಾತ್ರಿ ನಿವಾಸವನ್ನು ಲೋಕಾರ್ಪಣೆ ಮಾಡಿದರು. ಕ್ಷೇತ್ತದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಮಾಜಿ ಸಚಿವರಾದ ಅಪ್ಪಾಜಿ ನಾಡಗೌಡ, ಶಾಸಕರಾದ ಆನಂದ ನ್ಯಾಮಗೌಡ, ಸುನಿಲ್ ಪಾಟೀಲ್, ಪ್ರಕಾಶ್ ರಾಥೋಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರು ಹಾಜರಿದ್ದರು.

ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು

ಮರಿಯಮ್ಮನಹಳ್ಳಿ:ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ನಾ.ಗೌ) ಮರಿಯಮ್ಮನಹಳ್ಳಿ ಹೋಬಳಿಘಟಕ ಅಧ್ಯಕ್ಷ ಈಡಿಗರರಮೇಶ ಬ್ಯಾಲಕುಂದಿ ಹೇಳಿದ್ದಾರೆ. ಹಿಂದಿ ನಟ ಅಜಯ್ ದೇವಗನ್ ಟ್ವಿಟ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕನ್ನಡಿಗರು, ನಮಗೆ ನಮ್ಮದೇ ಆದ ಭಾಷೆ, ಸ್ವಾಭಿಮಾನ ಇದೆ. ನಮ್ಮ ಭಾಷೆ, ನೆಲ ಮತ್ತು ಜಲ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ದೇಶ ಅನೇಕ ಭಾಷೆಗಳ ಗೂಡು, ಅವರವರಿಗೆ ಆಯಾ ಭಾಷೆ ಬಗ್ಗೆ ಸ್ವಾಭಿಮಾನವಿರುತ್ತದೆ. …

ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು Read More »

ಜಿಮ್ ಟ್ರೈನರ್ ಧನ್ಯಕುಮಾರ್ ಬರ್ಬರ ಹತ್ಯೆ

ವಿಜಯನಗರ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ ಬಳಿ ಜಿಮ್ ಟ್ರೈನರ್ ಧನ್ಯಕುಮಾರ್ ಬರ್ಬರ ಹತ್ಯೆ ಪ್ರಕರಣ ಸುಮಾರು 30 ಕಡೆ ಚುಚ್ಚಲಾಗಿದೆ ಸಾಕಷ್ಟು ಬಾರಿ ಚುಚ್ಚಿ ಕೊಲೆ ಮಾಡಿರೋದು ನೋಡಿದ್ರೆ,ಇದು ಯಾವುದೋ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾಡಲಾಗಿದೆ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತದೆ ಅವರು ರಾತ್ರಿ ಊಟಕ್ಕೆ ಇಲ್ಲಿ ಬಂದಿದ್ರು, ಇಲ್ಲಿ ಯಾಕೆ ಬಂದ್ದು ಜತೆಗೆ ಯಾರು, ಬಂದಿದ್ರು ಅಂತ ನಾವು ಮಾಹಿತಿ ಪಡೆಯುತ್ತಿದ್ದೇವೆ ಜತೆಗೆ ಅವರು ದಾವಣಗೆರೆಯಲ್ಲಿ ಕೆಲಸ ಮಾಡುವ ಜಾಗದಲ್ಲಿ ಸಹ …

ಜಿಮ್ ಟ್ರೈನರ್ ಧನ್ಯಕುಮಾರ್ ಬರ್ಬರ ಹತ್ಯೆ Read More »

ಗ್ರಾ.ಪಂ‌.ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ಡಣಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಂದಿರಾಗಾಂಧಿ ನಗರದಲ್ಲಿ ಬಹುದಿನಗಳಿಂದ ಸ್ವಚ್ಛತೆ ಕಾಣದೇ ಇದ್ದ ಚರಂಡಿಯನ್ನು ಗ್ರಾಮ ಪಂಚಾಯತಿ ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು. ಮನುಷ್ಯನಿಗೆ ಸಣ್ಣಮಟ್ಟದ ಅಧಿಕಾರ ಸಿಕ್ಕರೆ ಸಾಕು, ಆತನ ಖದರೆ ಬದಲಾಗುತ್ತದೆ.ಆದರೆ ಇಲ್ಲೊಬ್ಬರು ಗ್ರಾ.ಪಂ.ಸದಸ್ಯರಾದರು ಯಾವುದೇ ಎಗ್ಗಿಲ್ಲದೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಡಣಾಯಕನಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಇಂದಿರಾಗಾಂಧಿ ನಗರದಲ್ಲಿ ಬಹುದಿನಗಳಿಂದ ಗಬ್ಬುನಾರುತ್ತಿದ್ದ ಚರಂಡಿಯನ್ನು ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಭಾನುವಾರ ಸ್ವಚ್ಛತೆ ಗೊಳಿಸಿದ್ದಾರೆ. ಬಳಕೆ ನೀರು ಕೂಡ ಸರಾಗವಾಗಿ …

ಗ್ರಾ.ಪಂ‌.ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು Read More »

ಕೋ-ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವ

ಬೆಂಗಳೂರು : ಪ್ರತಿಷ್ಟಿತ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಐದು ದಶಕಗಳ ತನ್ನ ಯಶಸ್ವಿ ಸಾರ್ಥಕ ಸೇವೆ ಸವಿನೆನಪಿನಲ್ಲಿ ಇದೇ 23ರಂದು ಅರಮನೆ ಮೈದಾನದ ಕಿಂಗ್ಸ್‍ಕೋರ್ಟ್‍ನಲ್ಲಿ ಸುವರ್ಣ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ. ಈ ಕುರಿತು ಬ್ಯಾಂಕ್ ಅಧ್ಯಕ್ಷರಾದ ಎಚ್.ಸಿ.ಗೋಪಾಲ್, ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿ, 2019ರಲ್ಲೇ ಬ್ಯಾಂಕ್‍ನ ಸುವರ್ಣ ಮಹೋತ್ಸವ ಸಮಾರಂಭ ಆಚರಣೆ ಮಾಡಬೇಕಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಸಾಧ್ಯವಾಗದ ಕಾರಣ ಈಗ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಉದ್ಘಾಟನೆ …

ಕೋ-ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವ Read More »

ಮುಸಲ್ಮಾನ ಗುಂಡಾಗಳಿಂದ ಸಮಸ್ಯೆ: ಶೋಭಾ ಕರಂದ್ಲಾಜೆ ಗುಟುರು

ಹೊಸಪೇಟೆ: ಮುಸಲ್ಮಾನ ಗುಂಡಾಗಳಿಂದ ರಾಜ್ಯದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು. ನಗರದಲ್ಲಿ ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವರ್ಷ ಒಂದು ಸಮುದಾಯದ ಗುಂಡಾಗಳು ಕೆಜಿ- ಡಿಜೆಹಳ್ಳಿ ಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಂದಲೆ ಮಾಡಿದ್ದರು. ಈ ವರ್ಷ ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಇವರೆಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುವಂತವರನ್ನು ಬಂಧಿಸಬೇಕು. ಹರ್ಷನ ಕೊಲೆಯಾದ ಮೇಲೆ ಶಿವಮೊಗ್ಗದಲ್ಲಿ ಇದೇ ರೀತಿಯ ಘಟನೆ ನಡೆಯಿತು. …

ಮುಸಲ್ಮಾನ ಗುಂಡಾಗಳಿಂದ ಸಮಸ್ಯೆ: ಶೋಭಾ ಕರಂದ್ಲಾಜೆ ಗುಟುರು Read More »

ಕಾನೂನು ಕೈಗೆತ್ತಿಕೊಳ್ಳುವರನ್ನು ಬಿಡುವ ಮಾತೇ ಇಲ್ಲ

ಹೊಸಪೇಟೆ: ಹುಬ್ಬಳ್ಳಿ ಗಲಭೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿ.ಕಾನೂನು ಕೈಗೆತ್ತಿಕೊಳ್ಳುವರನ್ನು ಬಿಡುವ ಮಾತೇ ಇಲ್ಲ.ನಿನ್ನೆ ರಾತ್ರಿ ಒಬ್ಬ ಯುವಕ ತನ್ನ ಮೊಬೈಲ್ ವಾಟ್ಸಪ್ ನಲ್ಲಿ ಸ್ಟೇಟಸ್ ವಿವಾದಿತ ಪೋಸ್ಟ್ ಹಾಕಿದ್ದಾರೆ. ಅದರಿಂದ ಗಲಾಟೆ ಆರಂಭವಾಗಿದೆ, ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಈಗಾಗಲೇ ಪೋಸ್ಟ್ ಹಾಕಿದ ವ್ಯಕ್ತಿ ಸೇರಿದಂತೆ ಹಲವರ ಬಂಧನವಾಗಿದೆ. ಯಾವುದೇ ಧರ್ಮದವರಾಗಲಿ ಅವರನ್ನು ಬಿಡಯವ ಮಾತೇ ಇಲ್ಲ. ಇದೊಂದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಾಣುತ್ತೆ. ನನಗೆ ಬಂದ ಮಾಹಿತ ಪ್ರಕಾರ ಅಲ್ಲಿ …

ಕಾನೂನು ಕೈಗೆತ್ತಿಕೊಳ್ಳುವರನ್ನು ಬಿಡುವ ಮಾತೇ ಇಲ್ಲ Read More »

ಅಂಬೇಡ್ಕರ್ ರಚಿಸಿದ ಸಂವಿಧಾನದ ಶಕ್ತಿ: ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ

ಹೊಸಪೇಟೆ: ಒಬ್ಬ ಸಾಮಾನ್ಯ ಮಹಿಳೆಯು ಸಹ ಇಂದು ರಾಜ್ಯದ ಮಂತ್ರಿ ಹಾಗೂ ಸಚಿವೆಯಾಗುತ್ತಿದ್ದಾಳೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಆಂಬೇಡ್ಕರ್ ಅವರು ರಚಿಸಿದ ಈ ನಮ್ಮ ಸಂವಿಧಾನದ ಶಕ್ತಿಯಿಂದ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು. ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ಹೊಸಪೇಟೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹೊಸಪೇಟೆಯ ಜೈಭೀಮ್ ವೃತ್ತದದಲ್ಲಿ ಗುರುವಾರ ಏರ್ಪಡಿಸಿದ್ದ ಮಹಾನ್ ಮಾನವತವಾದಿ, …

ಅಂಬೇಡ್ಕರ್ ರಚಿಸಿದ ಸಂವಿಧಾನದ ಶಕ್ತಿ: ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ Read More »

Translate »
Scroll to Top