ಅಯೋಧ್ಯೆಯಲ್ಲಿ ಯಶಸ್ವಿ ಬಯಲಾಟ ಪ್ರದರ್ಶನ ನಡೆಸಿ ವಿಜಯನಗರಕ್ಕೆ ಆಗಮಿಸಿದ ತಂಡ

ಹೊಸಪೇಟೆ : ಅಯೋಧ್ಯೆಯಲ್ಲಿ ಯಶಸ್ವಿಯಾಗಿ ಬಯಲಾಟ ಪ್ರದರ್ಶನ ನಡೆಸಿದ ಸಂಪೂರ್ಣ ರಾಮಾಯಣ ಬಯಲಾಟ ತಂಡ ತಮ್ಮ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿಕೊಂಡು ವಿಜಯನಗರಕ್ಕೆ  ವಾಪಸ್ ಆಗಮಿಸಿದೆ .

 

ರಾಮನೂರಿನಲ್ಲಿ ಸಂಪೂರ್ಣ ರಾಮಾಯಣವನ್ನು ಬಯಲಾಟದಲ್ಲಿ ಪ್ರದರ್ಶನ ಮಾಡಿತ್ತು. ಇನ್ನೂ ವಿಜಯನಗರಕ್ಕೆ ವಾಪಸ್ಸಾದ ತಂಡದ ನಾಯಕ, ರಾಮನ ಪಾತ್ರಧಾರಿ ಸತ್ಯನಾರಾಯಣ ಮಾತನಾಡಿ, ನಮಗೆ ಸ್ವತಃ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೇ ಸ್ವಾಗತ ಮಾಡಿದ್ರು . ನಾವು ರಾಮಾಯಣದ ವೇಷಭೂಷಣ ಧರಿಸಿ ಅಯೋಧ್ಯೆಯಲ್ಲಿ 7 ಕಿಮೀ  ರ್ಯಾಲಿಯಲ್ಲಿ ಭಾಗಿಯಾಗಿದ್ದೆವು . ಎಲ್ಲಿಂದ ಬಂದು ನಾವು, ಎಲ್ಲಿ ರಾಮನ ಪಾತ್ರ, ಲಕ್ಷ್ಮಣನ ಪಾತ್ರ ಮಾಡ್ತಿದ್ದೇವೆ ಎಂದು ಕಣ್ಣಿನಲ್ಲಿ ನೀರು ಬಂದಿದ್ದವು. ಯುಪಿ ಸಿಎಂ ಯೋಗಿ ಆದಿತ್ಯನಾಥ್, ಪಿಎಂ ಮೋದಿಯವರಿಗೆ ನಾವು ವಿಶೇಷ ಧನ್ಯವಾದಗಳು ಹೇಳುತ್ತೇವೆ ಎಂದು ತಿಳಿಸಿದರು.

ಹೊಸಪೇಟೆಯ ಸತ್ಯನಾರಾಯಣ ನೇತೃತ್ವದ ತಂಡ 12 ರಂದು ಹೊಸಪೇಟೆಯಿಂದ ಅಯೋಧ್ಯೆಗೆ ತೆರಳಿತ್ತು. ಜ.14 ರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸಪೇಟೆಯ ಬಯಲಾಟ ತಂಡದಿಂದಲೇ ಮುನ್ನುಡಿ ಬರೆಯಲಾಗಿತ್ತು . 4 ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶನ ಮಾಡಿದ್ದ ಹೊಸಪೇಟೆಯ ಬಯಲಾಟ ತಂಡ ಇದೀಗ ಹನುಮನನಾಡಿಗೆ ವಾಪಸ್ಸಾಗಿದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top