ಹೊಸಪೇಟೆ : ಅಯೋಧ್ಯೆಯಲ್ಲಿ ಯಶಸ್ವಿಯಾಗಿ ಬಯಲಾಟ ಪ್ರದರ್ಶನ ನಡೆಸಿದ ಸಂಪೂರ್ಣ ರಾಮಾಯಣ ಬಯಲಾಟ ತಂಡ ತಮ್ಮ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿಕೊಂಡು ವಿಜಯನಗರಕ್ಕೆ ವಾಪಸ್ ಆಗಮಿಸಿದೆ .
ರಾಮನೂರಿನಲ್ಲಿ ಸಂಪೂರ್ಣ ರಾಮಾಯಣವನ್ನು ಬಯಲಾಟದಲ್ಲಿ ಪ್ರದರ್ಶನ ಮಾಡಿತ್ತು. ಇನ್ನೂ ವಿಜಯನಗರಕ್ಕೆ ವಾಪಸ್ಸಾದ ತಂಡದ ನಾಯಕ, ರಾಮನ ಪಾತ್ರಧಾರಿ ಸತ್ಯನಾರಾಯಣ ಮಾತನಾಡಿ, ನಮಗೆ ಸ್ವತಃ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೇ ಸ್ವಾಗತ ಮಾಡಿದ್ರು . ನಾವು ರಾಮಾಯಣದ ವೇಷಭೂಷಣ ಧರಿಸಿ ಅಯೋಧ್ಯೆಯಲ್ಲಿ 7 ಕಿಮೀ ರ್ಯಾಲಿಯಲ್ಲಿ ಭಾಗಿಯಾಗಿದ್ದೆವು . ಎಲ್ಲಿಂದ ಬಂದು ನಾವು, ಎಲ್ಲಿ ರಾಮನ ಪಾತ್ರ, ಲಕ್ಷ್ಮಣನ ಪಾತ್ರ ಮಾಡ್ತಿದ್ದೇವೆ ಎಂದು ಕಣ್ಣಿನಲ್ಲಿ ನೀರು ಬಂದಿದ್ದವು. ಯುಪಿ ಸಿಎಂ ಯೋಗಿ ಆದಿತ್ಯನಾಥ್, ಪಿಎಂ ಮೋದಿಯವರಿಗೆ ನಾವು ವಿಶೇಷ ಧನ್ಯವಾದಗಳು ಹೇಳುತ್ತೇವೆ ಎಂದು ತಿಳಿಸಿದರು.
![](https://kannadanadunews.in/wp-content/uploads/2024/01/WhatsApp-Image-2024-01-20-at-11.02.58-AM-1024x580.jpeg)
ಹೊಸಪೇಟೆಯ ಸತ್ಯನಾರಾಯಣ ನೇತೃತ್ವದ ತಂಡ 12 ರಂದು ಹೊಸಪೇಟೆಯಿಂದ ಅಯೋಧ್ಯೆಗೆ ತೆರಳಿತ್ತು. ಜ.14 ರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸಪೇಟೆಯ ಬಯಲಾಟ ತಂಡದಿಂದಲೇ ಮುನ್ನುಡಿ ಬರೆಯಲಾಗಿತ್ತು . 4 ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶನ ಮಾಡಿದ್ದ ಹೊಸಪೇಟೆಯ ಬಯಲಾಟ ತಂಡ ಇದೀಗ ಹನುಮನನಾಡಿಗೆ ವಾಪಸ್ಸಾಗಿದೆ.