ಹೊಸಪೇಟೆ : ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಿಜಯನಗರ ಕ್ಷೇತ್ರದ ಶಾಸಕ HR ಗವಿಯಪ್ಪ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಹೊಸಪೇಟೆಯ ಹುಡಾ ಅಧ್ಯಕ್ಷರಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ ನೇಮಕ ವಾಗಿದ್ದಾರೆ.
![](https://kannadanadunews.in/wp-content/uploads/2024/03/Hosapete-1024x349.jpg)
![](https://kannadanadunews.in/wp-content/uploads/2024/03/WhatsApp-Image-2024-03-15-at-7.40.56-AM-705x1024.jpeg)
ಗ್ಯಾರಂಟಿ ಯೋಜನೆಗಳ ಜಾರಿ ಸಮಿತಿಗೆ ವಿಜಯನಗರ ಜಿಲ್ಲಾಧ್ಯಕ್ಷರನ್ನಾಗಿ ಕುರಿ ಶಿವಮೂರ್ತಿಯವರನ್ನು ನೇಮಕ ಮಾಡಲಾಗಿದೆ. ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಹೆಚ್.ಎನ್.ಎಫ್. ಇಮಾಮ್ ನಿಯಾಜಿ ಹಾಗೂ ಕುರಿ ಶಿವಮೂರ್ತಿಗೆ ಸ್ಥಾನ ಮಾನ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಕಾರ್ಯಕರ್ತರಿಗೆ ಅಧಿಕಾರ ನೀಡುವ ಮೂಲಕ ಜನಪರ ಸರ್ಕಾರ ಎಂದೆನಿಸಿಕೊಂಡಿದೆ.
Facebook
Twitter
LinkedIn
WhatsApp
Print
Email
Telegram