ರೈತರ ಬದುಕಿಗೆ ಆಸರೆಯಾದ ಹೂಗಳ ರಾಣಿ
ಸುರೇಶ ಬೆಳೆಗೆರೆ ಚಳ್ಳಕೆರೆ : ಗುಲಾಬಿ ಹೂವನ್ನು ಹೂಗಳ ರಾಣಿ ಎಂದೇ ಕರೆಯಲಾಗುತ್ತದೆ. ಇಂತಹ ಗುಲಾಬಿಯನ್ನು ಬೆಳೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಇಲ್ಲಿನ ರೈತರೊಬ್ಬರು. ಇತ್ತೀಚಿನ ದಿನಗಳಲ್ಲಿ ರೈತರು ಈರುಳ್ಳಿ, ಟೊಮೊಟೊ ಇತರೆ ಬೆಳೆಗಳನ್ನು ಬೆಳೆದು ಸಂಪೂರ್ಣ ನಷ್ಟ ಅನುಭವಿಸಿ ವಿನೂತನ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದ ರೈತರಾದ ಮಹೇಶ, ಶ್ರೀದೇವಿ ಎಂಬುವರು ನರೇಗಾ ಖಾತ್ರಿ ಯೋಜನೆಯಡಿ ತಮ್ಮ ಜಮೀನಿನಲ್ಲಿ ಮೆರಾಬಲ್ ಎನ್ನುವ ಗುಲಾಬಿ ಬೆಳೆ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. …