`ಬೆಳೆಯುವ ಪೈರು ಮೊಳಕೆಯಲ್ಲಿ’
ಬೇಲೂರು : ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಇಲ್ಲಿನ ಪಿಯು ವಿದ್ಯಾರ್ಥಿಯೋರ್ವ ಶಿವ, ವ್ಯಕ್ತಿಚಿತ್ರ, ಸುಭಾಷಚಂದ್ರಬೋಸ್, ಉಪೇಂದ್ರ, ದರ್ಶನ್ ಸೇರಿದಂತೆ ಹಲವರ ಭಾವಚಿತ್ರವನ್ನು ಪೆನ್ಸಿಲ್ನಿಂದ ರಚಿಸಿದ್ದಾನೆ. ಚಿಕ್ಕಂದಿನಿoದಲೇ ಹವ್ಯಾಸಕ್ಕಾಗಿ ಪೆನ್ಸಿಲ್ ಹಿಡಿದು ಗೀಚುತ್ತಿದ್ದ ವಿದ್ಯಾರ್ಥಿ ಬಿ.ಆರ್.ಪ್ರಜ್ವಲ್, ಇಲ್ಲಿನ ಕೆಂಪೇಗೌಡರ ರಸ್ತೆಯಲ್ಲಿರುವ ಪತ್ರಕರ್ತ ಹಾಗೂ ಎಪಿಎಂಸಿ ಮಾಜಿ ಸದಸ್ಯ ಪೈಂಟ್ರವಿ ಅವರ ಪುತ್ರ. ಇದೀಗ ಈ ವಿದ್ಯಾರ್ಥಿ ಹಾಸನದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ಬಿಡುವಿನ ವೇಳೆಯಲ್ಲಿ ಈ ಚಿತ್ರಗಳ ರಚಿಸಿದ್ದಾನೆ. ಭಾವಚಿತ್ರ ರಚನೆಯ ಇದು ಆರಂಭವಾದರೂ ನೋಡುಗರ ಹಿತಕಾಯುತ್ತದೆ. …