ವೈದ್ಯ ಅಕ್ರಮವಾಗಿ ಕಿಡ್ನಿ ಮಾರಾಟ ಮಾಡುತ್ತಿದ್ದ ಜಾಲ ಕರ್ನಾಟಕಕ್ಕೂ ವ್ಯಾಪಿಸಿದೆ

ಬೆಂಗಳೂರು: ಅಂತಾರಾಷ್ಟ್ರೀಯ ಸಂಪರ್ಕ ಹೊಂದಿರುವ ಕೇರಳ ಮೂಲದ ವೈದ್ಯ ಅಕ್ರಮವಾಗಿ ಕಿಡ್ನಿ ಮಾರಾಟ ಮಾಡುತ್ತಿದ್ದ ಜಾಲ ಕರ್ನಾಟಕಕ್ಕೂ ವ್ಯಾಪಿಸಿದೆ.

ಕೇಂದ್ರೀಯ ಬೇಹುಗಾರಿಕೆ ಎಜೆನ್ಸಿಗಳು ನೀಡಿದ ಸುಳಿವಿನ ಆಧಾರದಲ್ಲಿ ಇರಾನ್‌ನಿಂದ ಹಿಂದಿರುಗಿದ ವೈದ್ಯ ಸಬಿತ್ ನಾಸರ್‌ನನ್ನು ಕೇರಳ ಪೊಲೀಸರು, ಇದೇ ತಿಂಗಳ ೧೯ ರಂದು ಬಂಧಿಸಿದ್ದರು. ವಿಚಾರಣೆ ವೇಳೆ ಬಂಧಿತ ಆರೋಪಿ ನಾಸರ್, ತಾನು ಅಕ್ರಮವಾಗಿ ಅಂಗಾಂಗ ವ್ಯಾಪಾರದಲ್ಲಿ ತೊಡಗಿದ್ದು, ಹಣಕ್ಕಾಗಿ ಇಪ್ಪತ್ತು ಮಂದಿಯನ್ನು ಕಿಡ್ನಿ ಕಸಿ ಮಾಡಲು ಇರಾನ್‌ಗೆ ಕರೆದೊಯ್ದಿದ್ದಾಗಿ ತಿಳಿಸಿದ್ದಾರೆ.

 

ವಿಚಾರಣೆಯ ವೇಳೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳ ಜನರನ್ನು ಅಂಗಾಂಗ ದಾನಿಗಳಾಗಿ ಇರಾನ್‌ಗೆ ಕರೆದೊಯ್ಯಲಾಗಿದೆ ಎಂದು ಸಬಿತ್ ನಾಸರ್ ಬಹಿರಂಗಪಡಿಸಿದ್ದಾನೆ ಎಂದು ಕೇರಳ ಎಸ್‌ಐಟಿ ತನಿಖಾ ವರದಿ ತಿಳಿಸಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top