ಮರುಕಳಿಸಿದ ವಿಜಯನಗರ ವೈಭವ
ವಿಜಯನಗರ : ವಿಜಯನಗರ ಸಾಮ್ರಾಜ್ಯವಾಳಿದ ನೆಲದಲ್ಲಿ ಮತ್ತೆ ವಿಜಯನಗರ ವೈಭವ ಮರುಕಳಿಸಿತು!. ಹೌದು ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ನಡೆದ ವಿಜಯನಗರ ವೈಭವ ಮೆರವಣಿಗೆಯು ನಾಡಿನ ವೈವಿಧ್ಯಮಯ ಕಲೆಯನ್ನು ಅನಾವರಣಗೊಳಿಸಿತು;ಇದರ ಜೊತೆಗೆ ವಿಜಯನಗರ ಅರಸರ ದರ್ಬಾರ್ ಕೂಡ ನೆನಪಿಸಿತು. ನಗರದ ವಡಕರಾಯ ದೇವಸ್ಥಾನದಿಂದ ಮಧ್ಯಾಹ್ನ 3.45ಕ್ಕೆ ಆರಂಭವಾದ ವಿಜಯನಗರ ವೈಭವದ ಮೆರವಣಿಗೆಗೆ ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ …