ದೇವನಹಳ್ಳಿ: ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ 5 ಹೋಬಳಿಗಳಿಗೂ ತಲಾ 60 ಲಕ್ಷ ರೂಗಳ ಕಾಮಗಾರಿಗೆ ಇಂದು ಕುಂದಾಣ ಹೋಬಳಿಯ ಗ್ರಾಮಗಳಿಗೆ ಸಿ.ಸಿ.ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ್ದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
![](http://www.kannadanadunews.in/wp-content/uploads/2021/10/WhatsApp-Image-2021-10-01-at-4.43.32-PM-1024x461.jpeg)
ದೇವನಹಳ್ಳಿ ತಾಲ್ಲೂಕಿನ ದಾಸರಹಳ್ಳಿ, ಮಾಯಸಂದ್ರ, ಮನುಗೊಂಡನಹಳ್ಳಿ, ಶಾನಪ್ಪನಹಳ್ಳಿ, ದೊಡ್ಡಗೊಳಹಳ್ಳಿ , ಸೀಕಾಯನಹಳ್ಳಿ, ಸೋಲೂರು, ಬ್ಯಾಡ್ರಹಳ್ಳಿ, ಬಿದಲೂರು, ಅಣಿಘಟ್ಟ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ. ಇದರ ಜೊತೆಯಲ್ಲಿ 5 ಕೋಟಿ ಹಣ ಮಂಜೂರಾಗಿದ್ದು ಎಲ್ಲವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಿ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳು ಗುಂಡಿ ಮುಕ್ತ ಮಾಡುವುದಾಗಿ ತಿಳಿಸಿ ಇವೆಲ್ಲವು ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಮಾಡಬೇಕಿತ್ತು ನಂತರ ಬಂದ ಸರ್ಕಾರ ಹಣ ತಡೆಹಿಡಿದಿದ್ದರಿಂದ ತಡವಾಗಿದೆ. ಇನ್ನು ಮುಂದೆ ಕಾಮಗಾರಿಗಳು ನಡೆಯುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಜನಪ್ರತಿನಿಧಿಗಳು ಹಾಜರಿದ್ದರು.
![](http://www.kannadanadunews.in/wp-content/uploads/2021/10/WhatsApp-Image-2021-10-01-at-4.43.31-PM-1024x461.jpeg)