ಕೊಪ್ಪಳ,: ತಾಲೂಕಿನ ಗಿಣಿಗೇರಿ ಗ್ರಾಮದ ನವಚೇತನ ತರುಣ ಸಂಘ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಶನಿವಾರ ದಂದು
ಆಚರಿಸಲಾಯಿತು. ಬಿಜೆಪಿ ಮುಖಂಡ ಅಮರೇಶ ಕರಡಿ ಅವರು ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪವನ್ನು ಅರ್ಪಿಸುವುದರ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಿಣಗೇರಿ ಗ್ರಾಮದ ಕೊಟ್ರಬಸಯ್ಯ ಸ್ವಾಮಿ,ಕರಿಯಪ್ಪ ಮೇಟಿ, ಮಂಜುನಾಥ ಪಾಟೀಲ್, ಯಮನೂರಪ್ಪ ಕಟ್ಟಿಗಿ, ಪಾಂಡು ಹಲಗೇರಿ, ಚಂದ್ರು ಲಮಾಣಿ, ಶಂಕರಗೌಡ ಪೋಲೀಸ್ ಪಾಟೀಲ್, ನಾಗರಾಜ ಧರ್ಮನಗೌಡ್ರು, ಶಂಕರ್ ನಾಯಕ, ಶ್ರೀನಿವಾಸ ಪೂಜಾರ, ಫಕೀರಸ್ವಾಮಿ ಕರ್ಕಿಹಳ್ಳಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.