ಮಿಂಚೇರಿ ಬೆಟ್ಟ ಚಾರಣ ಮಾಡಿದ ಪೊಲೀಸರು

ಬಳ್ಳಾರಿ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಿಂಚೇರಿ ಬೆಟ್ಟಕ್ಕೆ ಇಂದು ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಚಾರಣ ಮಾಡಿ ಖುಷಿ ಪಟ್ಟರು.

 

ಬೆಳಗ್ಗೆ 6 ಗಂಟೆಗೆ ಮಿಂಚೇರಿ ಬೆಟ್ಟದ ಪ್ರಾರಂಭದಲ್ಲಿ ಜಮಾಯಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಮತ್ತಿತರೆ ಅಧಿಕಾರಿಗಳು 7 ಗಂಟೆ 30 ನಿಮಿಷಕ್ಕೆಲ್ಲಾ ಬೆಟ್ಟದ ತುತ್ತ ತುದಿಯಲ್ಲಿನ ಬ್ರಿಟೀಷ್ ಬಂಗ್ಲೆಯ ಬಳಿಗೆ ಸೇರಿ, ತಮ್ಮ ತಮ್ಮ ಫೋಟೋಗಳನ್ನು ತೆಗೆದುಕೊಳ್ಳುವ ಮೂಲಕ ಸಂತಸ ಪಟ್ಟರು. 

ಈ ವೇಳೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪ್ರತಿನಿತ್ಯ ಕೆಲಸದ ಒತ್ತಡದಲ್ಲಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸ್ವಲ್ಪ ವಿರಾಮ ನೀಡಿದಂತಾಗುತ್ತದೆ ಎಂಬ ಕಾರಣಕ್ಕೆ ಚಾರಾಣ ಮಾಡಲು ತೀರ್ಮಾನಿಸಿ ಇಂದು ಮಿಂಚೇರಿ ಬೆಟ್ಟಕ್ಕೆ ಬಂದಿದ್ದೇವೆ. ಬೆಳ್ಳಂ ಬೆಳಗ್ಗೆ ಪ್ರಕೃತಿಯ ಸೊಬಗನ್ನು ಸವಿಯುವುದು ಮನಸ್ಸಿಗೆ ತುಂಬಾ ಸಂತಸವಾಗುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಚಾರಣ ಮಾಡಲಾಗುವುದು ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಎಎಸ್ಪಿ ರವಿಕುಮಾರ್ ಸೇರಿದಂತೆ ಅರಣ್ಯ ಇಲಾಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top