ಜಿಲ್ಲೆಗಳು

ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಪುನೀತ್ ರಾಜಕುಮಾರ್

ಬೆಂಗಳೂರು:  ಮೇರು ನಟ ಡಾ ರಾಜ್ ಕುಮಾರ್ ಅವರ ಕಿರಿಯ ಪುತ್ರ ಸುಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಶ್ರೀ ಕಂಠೀರವ ಸ್ಟುಡಿಯೋಸ್ ಆವರಣದಲ್ಲಿರುವ ಡಾ ರಾಜ್ ಕುಮಾರ್ ಅವರ ಸಮಾಧಿಯ ಸಮೀಪವೇ ಇಂದು ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಭದ್ರತಾ ಕಾರಣಗಳು ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಹಮತಿ ಪಡೆದು ಪ್ರಕಟಿಸಿದ ಸಮಯಕ್ಕೆ ಮೊದಲೇ ಶುಕ್ರವಾರ ಹಠಾತ್ ನಿಧನರಾದ ಈ ಯುವ ನಟನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೊದಲು ಗಣ್ಯಾತಿ ಗಣ್ಯರು …

ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಪುನೀತ್ ರಾಜಕುಮಾರ್ Read More »

ಪವರ್ ಸ್ಟಾರ್ ಅಗಲಿಕೆಗೆ ಕಣ್ಣೀರಿಟ್ಟ ಹೃದಯವಂತ ಮಾಜಿ ಶಾಸಕ

ಕುಷ್ಟಗಿ:  ಡಾ.ರಾಜಕುಮಾರ ಕುಟುಂಬದ ಕಿರಿಯ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹೃದಯಘಾತವಾಗಿ ಏಕಾಏಕಿಯಾಗಿ  ಮೃತಪಟ್ಟಿದನ್ನು ಕಂಡು ಕೊಪ್ಪಳ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಹೃದಯವಂತ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಂಬನಿ ಮಿಡಿದು ಕಣ್ಣಲ್ಲಿ ನೀರನ್ನು ತಂದು ದುಃಖವನ್ನು ಪಟ್ಟರು. ಇಲ್ಲಿನ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ.ಪುನೀತ್ ರಾಜಕುಮಾರ ನನಗೆ ಬಹಳ ಚಿರಪರಿಚಿತರು ಏಕಾಏಕಿಯಾಗಿ ಅವರು ಹೃದಯಾಘಾತದಿಂದ ಮರಣ ಹೊಂದಿದನ್ನು ಕಂಡು  ನನಗೆ ಬಹಳ ದುಃಖವಾಗುತ್ತಿದೆ ಎಂದರು. ಪುನೀತ್ ರಾಜಕುಮಾರ ಅತ್ಯಂತ …

ಪವರ್ ಸ್ಟಾರ್ ಅಗಲಿಕೆಗೆ ಕಣ್ಣೀರಿಟ್ಟ ಹೃದಯವಂತ ಮಾಜಿ ಶಾಸಕ Read More »

ಕಂಟೇರ್ನಲ್ಲಿ ಕಾಣಿಸಿಕೊಂಡ ಬೆಂಕಿ

ವಿಜಯನಗರ: ಹೊಸಪೇಟೆ ತಾಲೂಕಿನ ವ್ಯಾಸನಕೆರೆ ಗ್ರಾಮದ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಂಟೇನರ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.         ಚಂಡಿಗಢ ನಿಂದ ಬೆಂಗಳೂರಿಗೆ ಮೆಡಿಸನ್ ತರುತ್ತಿದ್ದ ಕಂಟೇನರ್ ಲಾರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪುನೀತ್ ಅಭಿಮಾನಿಗಳು ಮೊಂಬತ್ತಿ ಹಿಡಿದು ಮುಖ್ಯಬೀದಿಯಲ್ಲಿ ಸಂತಾಪ ಸೂಚಿಸಿದರು

ಮರಿಯಮ್ಮನಹಳ್ಳಿ: ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನಲೆ ಮರಿಯಮ್ಮನಹಳ್ಳಿಯಲ್ಲಿ ನೂರಾರು ಪುನೀತ್ ಅಭಿಮಾನಿಗಳು ಮೊಂಬತ್ತಿ ಹಿಡಿದು ಮುಖ್ಯಬೀದಿಯಲ್ಲಿ ಸಾಗುವ ಮೂಲಕ ಸಂತಾಪ ಸೂಚಿಸಿದರು. ಇದೇ ವೇಳೆಯಲ್ಲಿ ಯುವ ಅಭಿಮಾನಿಗಳು ಅಳುತ್ತ ಪುನೀತ್ ರಾಜ್‍ಕುಮಾರ್ ರವರ ಭಾವಚಿತ್ರವನ್ನು ಹಿಡಿದುಕೊಂಡು ಬಿಕ್ಕಿ, ಬಿಕ್ಕಿ ಅತ್ತು ಬಾಸ್ ಇಷ್ಟು ಬೇಗ ನಮ್ಮನ್ನು ಬಿಟ್ಟೋದ್ರಾ ಎಂದು ಗೋಳಾಡಿದ ಪ್ರಸಂಗ ನಡೆಯಿತು. ನಂತರ ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ. ದೀಪ ಬಳಗಿ ಪುನೀತ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿದರು. …

ಪುನೀತ್ ಅಭಿಮಾನಿಗಳು ಮೊಂಬತ್ತಿ ಹಿಡಿದು ಮುಖ್ಯಬೀದಿಯಲ್ಲಿ ಸಂತಾಪ ಸೂಚಿಸಿದರು Read More »

ಟ ಸಾರ್ವಭೌಮ ರಾಜ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ

ಕಾರಟಗಿ: ಈ ದಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಕಾರಟಗಿ ವತಿಯಿಂದ ನಮ್ಮನ್ನು ಅಗಲಿದ ಶ್ರೀ ನಟ ಸಾರ್ವಭೌಮ ರಾಜ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಯನ್ನು ಅರ್ಪಿಸಲಾಯಿತು. ಈ ಸಂಧರ್ಭದಲ್ಲಿ . ನಮ್ಮ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೆ ಸೂಗಪ್ಪ Lvt ಸಮೂಹ ಸಂಸ್ಥೆ ಗಳು ಮುಖ್ಯಸ್ಥರು , ನಮ್ಮ ಸಹಕಾರಿಯ ಸಂಸ್ಥಾಪಕ ಉಪಾಧ್ಯಕ್ಷ ರಾದ ಶ್ರೀ ಶಿವರೆಡ್ಡಿ ನಾಯಕ ಹಾಗೂ ಸಂಸ್ಥೆಯ ಉಪಾಧ್ಯಕ್ಷ ರು ಶ್ರೀ ಜಗದೀಶ್ Y …

ಟ ಸಾರ್ವಭೌಮ ರಾಜ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ Read More »

ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ

ದೇವನಹಳ್ಳಿ: ದೊಡ್ಮನೆ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ರವರ ಅಕಾಲಿಕ ಮರಣ ತುಂಬಲಾರದ ನಷ್ಟವಾಗಿದೆ, ಕನ್ನಡ ಚಿತ್ರರಂಗದ ಯೂತ್ ಐಕಾನ್ ಎಂದೇ ಪ್ರಸಿದ್ಧರಾದವರು 46 ವರ್ಷ ಚಿತ್ರರಂಗದಲ್ಲಿ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ನಿಜವಾಗಿಯೂ ಬಡವಾಗಿದೆ. ಜನ್ಮಜಾತ ಪ್ರತಿಭೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದ ಪುನೀತ್ ರಾಜ್ ಕುಮಾರ್ ಅವರು ಮರೆಯಾಗಿರುವುದು ಯಾರಿಗೂ ನಂಬಲಸಾಧ್ಯವಾದದ್ದು ಎಂದು ನಟ ನಿರ್ಮಾಪಕ ನಾಗರಾಜ್ ತಿಳಿಸಿದರು. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಸಾರ್ವಜನಿಕ ಸಂಪರ್ಕ ಕೇಂದ್ರ ಮತ್ತು ಭಾರತ …

ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ Read More »

ರಸ್ತೆ ಅಪಘಾತಗಳು ಸಂಭವಿಸದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ

ದೇವನಹಳ್ಳಿ: ಜಿಲ್ಲೆಯಲ್ಲಿರುವ ರಸ್ತೆಗಳ ಸ್ಥಿತಿ ಹದಗೆಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸುಧಾರಿತ ರಸ್ತೆಗಳನ್ನಾಗಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಸೂಚಿಸಿದರು. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಟೋಲ್‌ಗಳಲ್ಲಿ …

ರಸ್ತೆ ಅಪಘಾತಗಳು ಸಂಭವಿಸದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ Read More »

ಈ ನಾಡು ಕಂಡ ಅಪ್ರತಿಮ‌ ನಟ,ಪುನೀತ್ ರಾಜ್ ಕುಮಾರ್

ದೇವನಹಳ್ಳಿ: ಈ ನಾಡು ಕಂಡ ಅಪ್ರತಿಮ‌ ನಟ, ಕನ್ನಡಿಗರ ಕಣ್ಮಣಿ, ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನ ಬರಸಿಡಿಲು ಬಡಿದಂತಾಗಿ ನಂಬಲಸಾಧ್ಯವಾದ ಸುದ್ದಿಯಾಗಿದೆ ಎಂದು ದೇವನಹಳ್ಳಿ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ಸಂತಾಪ ಸೂಚಿಸಿದರು. ಪುನೀತ್ ಅವರ ನಿಧನದ ಈ ದಿನ ಕೇವಲ ಚಿತ್ರರಂಗದ ಪಾಲಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಮತ್ತು ಕರ್ನಾಟಕದ ಪಾಲಿಗೆ ಕರಾಳ ದಿನ. ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ …

ಈ ನಾಡು ಕಂಡ ಅಪ್ರತಿಮ‌ ನಟ,ಪುನೀತ್ ರಾಜ್ ಕುಮಾರ್ Read More »

ನನ್ನದೇ ಅಂತಿಮ ಎಂದು ಉದ್ಧಟತನದ ಮಾತುಗಳು ಪಿ.ಡಿ.ಓ ಉಷಾ ಅವರದು

ದೇವನಹಳ್ಳಿ: ಹಲವು ವಿಚಾರದಲ್ಲಿ ಪಿ.ಡಿ.ಓ ವಿರುದ್ಧ ಕೇಸ್ ಇದ್ದರೂ ಒಂದು ಬಾರಿ ಅಮಾನತ್ತಾಗಿದ್ದರೂ ಇದೇ ಪಂಚಾಯತಿಗೆ ನಿಯೋಜನೆ ಮಾಡಿದ್ದಾರೆ:ನಾನು ಕಲ್ಲಡ್ಕ ಪ್ರಭಾಕರ್ ಭಟ್ರು ಅವರ ಸೊಸೆ ನನ್ನನ್ನು ನೀವು ಏನೂ ಮಾಡಲು ಸಾಧ್ಯವಿಲ್ಲಾ ನೀವು ಕೇವಲ ಸದಸ್ಯರು ಅಷ್ಟೇ ನಾನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ನನ್ನದೇ ಅಂತಿಮ ಎಂದು ಉದ್ಧಟತನದ ಮಾತುಗಳು ಪಿ.ಡಿ.ಓ ಉಷಾ ಅವರದು, ಇವರು ಒಂದು ಬಾರಿ ಅಮಾನತ್ತಾಗಿದ್ದರೂ ಕೇಸು ದಾಖಲಿಸಿದ್ದರೂ ಇದೇ ಪಂಚಾಯತಿಗೆ ಕರ್ತವ್ಯ ನಿಯೋಜಿಸಿದ್ದಾರೆ ಇಲ್ಲಿನ ಕಡತಗಳನ್ನು ನಾಶಪಡಿಸುವ ಸಾಧ್ಯತೆ ಇದೆ …

ನನ್ನದೇ ಅಂತಿಮ ಎಂದು ಉದ್ಧಟತನದ ಮಾತುಗಳು ಪಿ.ಡಿ.ಓ ಉಷಾ ಅವರದು Read More »

ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು : ಮೆಹಬೂಬ್ ಪಾಷ

ದೇವನಹಳ್ಳಿ: ವಿಜಯಪುರ ಪಟ್ಟಣದ 15 ನೇ ವಾರ್ಡ್ ನ ಟಿಪ್ಪು ನಗರದ 2 ನೇ ಕ್ರಾಸ್ ನ ಜನತೆಗೆ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ತೋರುತ್ತಿದ್ದೇನೆ ಎಂದು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು 15 ನೇ ವಾರ್ಡ್ ಪುರಸಭಾ ಸದಸ್ಯೆ ಯ ಪತಿ ಮೆಹಬೂಬ್ ಪಾಷ ತಿಳಿಸಿದರು. ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ವಾರ್ಡ್ ಜನತೆಗೆ ನೀರಿನ ವಿಚಾರದಲ್ಲಿ ತೊಂದರೆ, ತಾರತಮ್ಯ, ಕೊಳವೆ ಬಾವಿಯ ಪೈಪ್ ತುಂಡರಿಸಿರುವುದು ಈ ಎಲ್ಲಾ ವಿಚಾರಗಳು …

ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು : ಮೆಹಬೂಬ್ ಪಾಷ Read More »

Translate »
Scroll to Top