ಅಂತರರಾಷ್ಟ್ರೀಯ

ಮೆಕ್ಕಾದಲ್ಲಿ ತಾಪಮಾನವು 50C ಗಿಂತ ಹೆಚ್ಚಳಕ್ಕೆ ಏರಿಕೆ: 550 ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವು

ಹಜ್: ಹಜ್ ಯಾತ್ರೆಗೆ ತೆರಳಿದವರಲ್ಲಿ ೫೫೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರಲ್ಲಿ ಕನಿಷ್ಠ ೩೨೩ ಮಂದಿ ಈಜಿಪ್ಟಿನವರಾಗಿದ್ದು, ಶಾಖ-ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಇಬ್ಬರು ಅರಬ್ ರಾಜತಾಂತ್ರಿಕರು ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಬ್ರಾಹಿಂ ರೈಸಿ ನಿಧನ: ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇದರಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ ಇರಾನ್ನಲ್ಲಿ ಆಡಳಿತ ಚುಕ್ಕಾಣಿಯನ್ನು ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರು ವಹಿಸಿಕೊಂಡಿದ್ದಾರೆ. ಇರಾನ್ ಸಂವಿಧಾನದ ಪ್ರಕಾರ ಅಧ್ಯಕ್ಷರು ಸಾವನ್ನಪ್ಪಿದರೆ, ಅವರ ನಂತರ ಉಪಧ್ಯಾಕ್ಷರು ಅಲ್ಲಿ ಮುಂದುವರಿಯುತ್ತಾರೆ.

ಗೂಗಲ್‌ನಿಂದ ೨೦೦ ಉದ್ಯೋಗಿಗಳು ವಜಾ

ನ್ಯೂಯರ್ಕಳ: ವಿಶ್ವದ ಅತಿದೊಡ್ಡ ರ್ಚ್ ಇಂಜಿನ್ ಗೂಗಲ್ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯು ನಿಲ್ಲುತ್ತಿಲ್ಲ. ಇತ್ತೀಚೆಗೆ, ಸುಂದರ್ ಪಿಚೈ ನೇತೃತ್ವದ ಆಲ್ಫಾಬೆಟ್ ಇಡೀ ಪೈಥಾನ್ ತಂಡವನ್ನು ವಜಾಗೊಳಿಸಿದೆ ಮತ್ತು ಈಗ ಮತ್ತೊಮ್ಮೆ ಕಂಪನಿಯಲ್ಲಿ ವಜಾಗೊಳಿಸುವ ದೊಡ್ಡ ಸುದ್ದಿ ಬಂದಿದೆ. ಗೂಗಲ್ ತನ್ನ ’ಕೋರ್’ ತಂಡದಿಂದ ಕನಿಷ್ಠ ೨೦೦ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ. ಆನಂದ್ ಕುಮಾರ್ ಅವರಿಗೆ ಅಂತರರಾಷ್ಟ್ರೀಯ ಸ್ವರ್ಣಮೇರು ಪ್ರಶಸ್ತಿ ಪ್ರದಾನ

ಬೆಂಗಳೂರು : “ಭಾರತ – ಥೈಲೆಂಡ್ ಸ್ನೇಹ ಮತ್ತು ಆರ್ಥಿಕ ಸಹಕಾರ [ಇಂಡೋ – ಥೈ ಪ್ರೆಂಡ್ ಶಿಪ್ ಅಂಡ್ ಎಕಾನಮಿಕ್ ಕೋ ಆಪರೇಷನ್] ಸಂಸ್ಥೆಯ ಸಮ್ಮೇಳನದಲ್ಲಿ ಸಿಟಿಜನ್ ಇಂಟಿಗ್ರೇಷನ್ ಪೀಸ್ ಇನ್ಸ್ಟಿಟ್ಯೂಟ್ ಕೊಡಮಾಡುವ ಅಂತರರಾಷ್ಟ್ರೀಯ ಸ್ವರ್ಣಮೇರು ಪ್ರಶಸ್ತಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಮಾನಸ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ಡಾ. ಆನಂದ್ ಕುಮಾರ್ ಅವರಿಗೆ ಸಂದಿದೆ.

ಲಂಡನ್ ಮೇಯರ್ ಅಭ್ಯರ್ಥಿ ತರುಣ್ ಗುಲಾಟೆ ಅವರನ್ನು ಸನ್ಮಾನಿಸಿದ ಚಾಂಪಿಯನ್ಸ್ ಗ್ರೂಪ್

ಬೆಂಗಳೂರು: ಅಮೆರಿಕದ ಭಾರತೀಯ ಮೂಲದ ಹಿರಿಯ ರಾಜಕಾರಣಿ ಹಾಗೂ ಲಂಡನ್ ಮೇಯರ್ ಅಭ್ಯರ್ಥಿ ತರುಣ್ ಗುಲಾಟಿ ಅವರನ್ನು ಲಂಡನ್ ಚಾಂಪಿಯನ್ ಸ್ಕ್ವೇರ್ ನಲ್ಲಿ ಚಾಂಪಿಯನ್ಸ್ ಗ್ರೂಪ್ ನಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಲಂಡನ್‌ನ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಸವರಾಜ ಹೊರಟ್ಟಿ, ಯು.ಟಿ. ಖಾದರ್

ಬೆಂಗಳೂರು: ಕರ್ನಾಟಕ ಕಾಮನ್ ವೆಲ್ತ್ ಸಂಸದೀಯ ಸಂಘದ ಕರ್ನಾಟಕ ಶಾಖೆಯ ವೀಕ್ಷಕರಾಗಿ ಘಾನಾ ದೇಶದಲ್ಲಿ ನಡೆದ 66ನೇ ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನ ಹಾಗೂ ಇತರೆ ದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ ಹಾಗೂ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರುಗಳು ಅಕ್ಟೋಬರ್ 16 ರಂದು ಯುನೈಟೆಡ್ ಕಿಂಗ್ ಡಮ್ನ ಲಂಡನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು.

ಬರಗಾಲದ ಘೋಷಣೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಉತ್ತರ ಬಂದಿಲ್ಲ : C M ಸಿದ್ದರಾಮಯ್ಯ

ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

ಹೈ-ಟೆಕ್‌ ಪ್ರಾಜೆಕ್ಟ್‌ ಸಂಸ್ಥೆಯಿಂದ ಇಸ್ರೋಗೆ ತನ್ನ ಉತ್ಪನ್ನಗಳ ಹಸ್ತಾಂತರ

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ – ೩ ರ ಯಶಸ್ಸಿನ ಭಾಗವಾಗಿರುವ ಏರೋ ಸ್ಪೇಸ್ ಉದ್ಯಮವಾದ ಹೈಟೆಕ್ ಪ್ರಾಜೆಕ್ಟ್ ಸಂಸ್ಥೆ ತನ್ನ ಪ್ರತಿಷ್ಠಿತ ಉತ್ಪನ್ನವಾದ ಹೈ-ಟೆಕ್ ಪ್ರಾಜೆಕ್ಟ್ಗಳು ಫ್ಯಾಬ್ರಿಕೇಟೆಡ್ ಕ್ರೂ ಎಸ್ಕೆಪ್ ಸಿಸ್ಟಮ್ ಕೋನಿಕಲ್ ಶೌಡ್ ಅನ್ನು ಇಸ್ರೋಗೆ ಹಸ್ತಾಂತರಿಸಿತು.

Translate »
Scroll to Top