ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ. ಆನಂದ್ ಕುಮಾರ್ ಅವರಿಗೆ ಅಂತರರಾಷ್ಟ್ರೀಯ ಸ್ವರ್ಣಮೇರು ಪ್ರಶಸ್ತಿ ಪ್ರದಾನ

ಬೆಂಗಳೂರು :ಭಾರತ ಥೈಲೆಂಡ್ ಸ್ನೇಹ ಮತ್ತು ಆರ್ಥಿಕ ಸಹಕಾರ [ಇಂಡೋ ಥೈ ಪ್ರೆಂಡ್ ಶಿಪ್ ಅಂಡ್ ಎಕಾನಮಿಕ್ ಕೋ ಆಪರೇಷನ್] ಸಂಸ್ಥೆಯ ಸಮ್ಮೇಳನದಲ್ಲಿ ಸಿಟಿಜನ್ ಇಂಟಿಗ್ರೇಷನ್ ಪೀಸ್ ಇನ್ಸ್ಟಿಟ್ಯೂಟ್ ಕೊಡಮಾಡುವ ಅಂತರರಾಷ್ಟ್ರೀಯ ಸ್ವರ್ಣಮೇರು ಪ್ರಶಸ್ತಿ  ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಮಾನಸ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ಡಾ. ಆನಂದ್ ಕುಮಾರ್ ಅವರಿಗೆ ಸಂದಿದೆ.

ಬ್ಯಾಂಕಾಕ್ ನ ಹಾಲಿಡೆ ಇನ್ ಹೋಟೆಲ್ ನಲ್ಲಿ ನಡೆದ ಸಮ್ಮೇಳನದಲ್ಲಿ ಥೈಲೆಂಡ್ ಮಾಜಿ ಉಪ ಪ್ರಧಾನಿ ಕೊರನ್ ದಬ್ಬಾರಾನ್ಸಿ ಅವರು ಆನಂದ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ಕೆ.ವಿ. ರಾಜನ್ ಮತ್ತಿತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಟಿಜನ್ ಇಂಟಿಗ್ರೇಷನ್ ಪೀಸ್ ಇನ್ಸ್ಟಿಟ್ಯೂಟ್, ಇಂಡೋ ಥೈ ಪ್ರೆಂಡ್ ಶಿಪ್ ಅಂಡ್ ಎಕಾನಮಿಕ್ ಕೋ ಆಪರೇಷನ್ ಸಂಸ್ಥೆ ಭಾರತ ಥೈಲೆಂಡ್ ನಡುವಿನ ಬಾಂಧವ್ಯ ಬಲವರ್ಧನೆಗಾಗಿ ಶ್ರಮಿಸುತ್ತಿದೆ. ಮುಂಬರುವ ದಿನಗಳಲ್ಲಿ ಥೈಲೆಂಡ್ ನಿಂದ ಕರ್ನಾಟಕ ಮತ್ತು ಬೆಂಗಳೂರು ನಡುವೆ ಆರ್ಥಿಕ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಈ ಪ್ರಶಸ್ತಿ ಡಾ. ಆನಂದ್ ಕುಮಾರ್ ಅವರ ಸಾರ್ವಜನಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಹೇಳಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top