ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ) ಹೊಸ ವರ್ಷದ ಸಂಭ್ರಮ 8ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ನಯನ ರಂಗಮಂದಿರ ಕನ್ನಡ ಭವನ ಜೆ.ಸಿ ರೋಡ್ ಬೆಂಗಳೂರಿನಲ್ಲಿ ಅಯೋಗಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಲವಾರು ಮನರಂಜನೆ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು,
![](https://kannadanadunews.in/wp-content/uploads/2024/01/WhatsApp-Image-2024-01-09-at-10.57.55-AM-1-1024x682.jpeg)
ಭರತನಾಟ್ಯ, ಕೂಚಿಪುಡಿ, ಕಥಕ್, ಮ್ಯಾಜಿಕ್ ಕಾಲ್ ಶೋ, ವೆಸ್ಟೆರ್ನ್ ಡ್ಯಾನ್ಸ್,ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋವಿಕಾಸಕ್ಕೆ ಪೂರಕವಾಗಿದ್ದು, ಮಾನಸಿಕ ನೆಮ್ಮದಿ ನೀಡುತ್ತದೆ ಎಂದರು.
ಟ್ರೇಡರ್ಸ್ ಟ್ರೈನಿಂಗ್ ಅಕಾಡೆಮಿ ಸಿಇಒ ಸಂತೋಷ್ ಕುಮಾರ್ , ಕೆಪಿಸಿಸಿ ವಕ್ತಾರರಾದ ಭವ್ಯ ನರಸಿಂಹಮೂರ್ತಿ , ಹಿನ್ನೆಲೆ ಗಾಯಕರು, ಮಜಾ ಟಾಕೀಸ್ ಕ್ಯಾತಿಯ ರೆಮೋ, ನೃತ್ಯ ಕಲಾವಿದ ಮುರುಗನ್, ಗಾಯಕರಾದ ಗುರುರಾಜ್ ಹೊಸಕೋಟೆ, ವಿಜಯ ಕರ್ನಾಟಕ ಆನ್ಲೈನ್ ಎಡಿಟರ್ ಪ್ರಸಾದ ನಾಯಕ್, ಡಾ. ಎಂ ಮಹ್ಮದ್ ಬಾಷಾ ಗೂಳ್ಯಂ ಪ್ರಧಾನ ಸಂಪಾದಕರು ದ ಡೈಲಿ ನ್ಯೂಸ್, ಹಿರಿಯ ಪತ್ರಕರ್ತ ರಮೇಶ್ ಸುರ್ವೆ, ನಟ ವೈಜ್ಯನಾಥ ಬಿರಾದಾರ, ಸಂಘದ ಪದಾಧಿಕಾರಿ ಕಿಶೋರ್ ಕುಮಾರ್ ಕೆ ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.