ಕಂದವಾರ : ಚಿಕ್ಕಬಳ್ಳಾಪುರ ಜಿಲ್ಲೆಯ ಕಂದವಾರದ ಸರ್ಕಾರಿ ಶಾಲೆ ಬಳಿ ಇರುವ ಶ್ರೀ ರಾಮ ದೇವಸ್ಥಾನದಲ್ಲಿಂದು ವೈಭವದಿಂದ ರಾಮ ದೇವರಿಗೆ ಪೂಜೆ ನೆರವೇರಿತು.
![](https://kannadanadunews.in/wp-content/uploads/2024/01/IMG-20240123-WA0047-768x1024.jpg)
ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷವೆಂದರೆ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಶಾಲೆಯಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದರು.
![](https://kannadanadunews.in/wp-content/uploads/2024/01/IMG-20240123-WA0044-1024x768.jpg)
ಈ ದೇವಾಲಯವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಛಾಯಾಗ್ರಾಹಕ ಕಂದವಾರ ವೆಂಕಟೇಶ್ ಅವರ ತಂದೆ ಕೆ. ಕೃಷ್ಣಪ್ಪ ಅವರು ನಿರ್ಮಿಸಿದ್ದರು. ಈ ದೇವಾಲಯದಲ್ಲಿ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
Facebook
Twitter
LinkedIn
WhatsApp
Email
Print
Telegram