ಹಂಪಿಯ ರಘುನಾಥ ಮಾಲ್ಯವಂತ ದೇಗುಲದಲ್ಲಿ ದೀಪೋತ್ಸವ

ಹಂಪೆ : ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಹಿನ್ನೆಲೆಯಲ್ಲಿ ಶ್ರೀರಾಮ ಚಾತುರ್ಮಾಸ ಕಳೆದಿದ್ದ ಹಂಪಿಯ ರಘುನಾಥ ಮಾಲ್ಯವಂತ ದೇಗುಲದಲ್ಲಿ ದೀಪೋತ್ಸವ ನಡೆಸಲಾಯಿತು.

 

ರಾವಾಣಸುರನು ಸೀತೆಯನ್ನು ಅಪಹರಿಸಿಕೊಂಡು ಹೋದ ಸಂದರ್ಭದಲ್ಲಿ ಸೀತಾಮಾತೆಯನ್ನು ಹುಡುಕಿಕೊಂಡು ಕಿಷ್ಕಿಂದ ಕ್ಷೇತ್ರಕ್ಕೆ ಬಂದಿದ್ದ ಪ್ರಭು ಶ್ರೀರಾಮ ಚಂದ್ರನು ಹಂಪಿಯ ಮಾಲ್ಯವಂತ ದೇವಾಲಯದಲ್ಲಿ ಉಳಿದುಕೊಂಡಿದ್ದನು.  ಈ ನಿಟ್ಟಿನಲ್ಲಿ ಮಾಲ್ಯವಂತ ದೇವಸ್ಥಾನದಲ್ಲಿ ಶ್ರೀರಾಮನಿಗೆ ವಿಶೇಷಲಂಕಾರದೊಂದಿಗೆ ಪೂಜೆ ನೆರವೇರಿಸಿ ಸಂಜೆಯ ವೇಳೆಯಲ್ಲಿ ದೀಪವನ್ನು ಹಚ್ಚುವ ಮೂಲಕ ದೀಪೋತ್ಸವ  ಆಚರಿಸಲಾಯಿತು. 

ಅಯೋಧ್ಯೆಯಿಂದ ವನವಾಸಕ್ಕೆ ಹೋದಾಗ, ರಾವಣಾಸುರನು ಸೀತಾಮಾತೆಯನ್ನು ಅಪಹರಿಸಿಕೊಂಡು ಹೋಗಿದ್ದ ಸಂದರ್ಭದಲ್ಲಿ ಸೀತೆಯನ್ನು ಹುಡುಕುತ್ತಾ ಹೊರಟಿದ್ದ ಶ್ರೀರಾಮ ಚಂದ್ರನು ಕಿಷ್ಕಿಂದೆಗೆ ಭೇಟಿ ನೀಡುತ್ತಾನೆ. ಅಲ್ಲಿ ಹನುಮನ ಸಹಾಯ ಪಡೆದು, ಸೀತೆಯ ಹುಟುಕಾಟ ಮುಂದುವರೆಸುತ್ತಾನೆ. ಆಗ ತುಂಗಭದ್ರಾ ನದಿಯ ಒಡಲಿನಲ್ಲಿರುವ ಮಾಲ್ಯವಂತ ದೇಗುಲದಲ್ಲಿ ಚಾತುರ್ಮಾಸ ಕಾಲ ಉಳಿದುಕೊಂಡಿರುತ್ತಾನೆ. ಹಾಗಾಗಿ ಆ ಸ್ಥಳದಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಇಂದಿಗೂ ಪೂಜೆ ನೆರವೇರಿಸುತ್ತಾ ಬಂದಿದ್ದಾರೆ. 

Facebook
Twitter
LinkedIn
Telegram
Email
WhatsApp
Print

Leave a Comment

Your email address will not be published. Required fields are marked *

Translate »
Scroll to Top