ಬಳ್ಳಾರಿ: ಬಳ್ಳಾರಿಯ ಕೆಐಎಡಿಬಿ ವಲಯ ಕಛೇರಿಯಲ್ಲಿ ನಡೆದಿರುವ 16.17 ಕೋಟಿ ರೂಗಳ ವಂಚನೆ ಪ್ರಕರಣದ ತನಿಖೆಯನ್ನು ಅತಿ ಶೀಘ್ರದಲ್ಲಿಯೇ ಸಿಐಡಿಗೆ ವರ್ಗಾಯಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಐಎಡಿಬಿ ಕಛೇರಿಯಲ್ಲಿ ಜರುಗಿರುವ ಕೋಟ್ಯಾಂತರ ರೂಗಳ ಅವ್ಯವಹಾರ (ವಂಚನೆ) ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂತೋಷ್ನನ್ನು ಈಗಾಗಲೇ ಬಂಧಿಸಿರುವ ಬಳ್ಳಾರಿಯ ಎಪಿಎಂಸಿ ಪೊಲೀಸರು ಹಾಗೂ ಸಮಗ್ರ ತನಿಖೆ ನಡೆಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಯಿಂದ 1.30ಕೋಟಿ ರೂಗಳ ವಿವಿಧ ಕಂಪನಿಗಳ 8 ಕಾರುಗಳು, 5 ಮೋಟಾರ್ ಬೈಕ್ಗಳು, 4 ವಿವಿಧ ಕಂಪನಿಗಳ ಮೊಬೈಲ್ಗಳು ಹಾಗೂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಅಂತೆಯೇ ವಂಚನೆಗೆ
ಸಂಬ0ಧಿಸಿದ0ತೆ, ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಅಂದಾಜು 30 ಲಕ್ಷ ರೂಗಳ ಹಣವನ್ನು ಫ್ರೀಜ್ ಮಾಡಿಸಲಾಗಿರುತ್ತದೆ ಎಂದು ಎಸ್ಪಿ ಡಾ|| ಸುಮನ್ ಡಿ ಪನ್ನೇಕರ್ ಹೇಳಿದ್ದಾರೆ. ಈ ವಂಚನೆಯ ಪ್ರಕರಣದಲ್ಲಿನ ಮೊತ್ತವು 15 ಕೋಟಿ ರೂಗಳಿಗೂ ಅಧಿಕ ಇರುವುದರಿಂದ, ಪೊಲೀಸ್ ಪ್ರಧಾನ ಕಛೇರಿಯ ನಿಯಮಗಳ ಅನುಸಾರ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅತಿ ಶೀಘ್ರದಲ್ಲಿಯೇ ಈ ಪ್ರಕರಣವನ್ನು ಸಿಐಡಿ ಬೆಂಗಳೂರು ಘಟಕಕ್ಕೆೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಹೊರಗುತ್ತಿಗೆ ನೌಕರನಾಗಿ ಕೆಲಸಕ್ಕೆ ಸೇರಿದ್ದ ಆರೋಪಿ ಸಂತೋಷ್ಕುಮಾರ್ ಹಂತ-ಹAತವಾಗಿ ತನ್ನ ಕೈಚಳಕ ತೋರಿ, ನಕಲಿ ಸಹಿಗಳನ್ನು ಮಾಡಿ ಕೋಟ್ಯಾಂತರ ರೂಗಳ ಹಣವನ್ನು ವಿವಿಧ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.