ಚಳಗೇರಿ,,ಫೆ,18 : ತಾಲೂಕಿನ ಚಳಗೇರಿ ಸರಕಾರಿ ಪ್ರೌಢಶಾಲೆಗೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಮುನಿರಾಬಾದ್ ಹಿರಿಯ ಉಪನ್ಯಾಸಕರಾದ ವೆಂಕಟೇಶ ಕೊಂಕಲ್. ಭೇಟಿ ನೀಡಿದರು. ಎಸ್, ಎಸ್, ಎಲ್, ಸಿ. ಪೂರ್ವ ಸಿದ್ಧತಾ ಪರೀಕ್ಷೆ ಕುರಿತು ಪರಿಶೀಲಿಸಿ ನಂತರ ತರಗತಿಗಳಿಗೆ ತೆರಳಿ ಮಕ್ಕಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿಚಾರಿಸಿ ಸಲಹೆ ನೀಡಿದರು. ಈಗ ಪರೀಕ್ಷಾ ಸಮಯ ಹಾಗಾಗಿ ಎಲ್ಲರೂ ಏಕಾಗ್ರತೆಯಿಂದ ಸತತವಾಗಿ ಓದಬೇಕು ಎಂದು ತಿಳಿಸಿ “ಪರೀಕ್ಷಾ ಭಯ” ಕುರಿತು ಮಕ್ಕಳಲ್ಲಿ ಧೈರ್ಯ ತುಂಬಿ ಚೆನ್ನಾಗಿ ಓದಲು ತಿಳಿಸಿದರು. ಅನಂತರ ಶಿಕ್ಷಕರ ಸಭೆ ನಡೆಸಿ ಸೂಕ್ತ ಮಾಹಿತಿ ನೀಡಿದರು.. ಎ, ಟಿ, ಎಲ್.. ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ, ವಿಶಾಲಾಕ್ಷಮ್ಮ, ಅರವಿಂದಕುಮಾರ ದೇಸಾಯಿ, ಶಾಕೀರ್ ಬಾಬಾ, ಶರಣಪ್ಪ ಪರಸಾಪುರ, ಸಿದ್ದನಗೌಡ ಪೊಲೀಸ್ ಪಾಟೀಲ್ ಇದ್ದರು. ಚಿಗುರು ಪುಸ್ತಕ ಕುರಿತು ಮಾಹಿತಿ ಪಡೆದುಕೊಂಡು, ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ತಿಳಿಸಿ, ಬೆಳಗ್ಗೆ ಹಾಗೂ ಸಾಯಂಕಾಲ ವಿಶೇಷ ತರಗತಿ ನಡೆಸಲು ತಿಳಿಸಿದರು. 75 ಪ್ಲಾನ್ ನ್ನು ಅನುಷ್ಠಾನ ಗೊಳಿಸಿ ಫಲಿತಾಂಶಕ್ಕೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.