ವಣಗೇರಿ ಗ್ರಾಮದಲ್ಲಿ ಕಾರ್ಮಿಕರಿಗೆ ಸುರಕ್ಷ ಕಿಟ್ ವಿತರಣೆ

ಕೊಪ್ಪಳ : ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕ ಒಕ್ಕೂಟ (ರಿ ) ಕೊಪ್ಪಳ ಇವರ ವತಿಯಿಂದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಕಾರ್ಮಿಕರಿಗೆ ಸುರಕ್ಷ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವರಾಜ್ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕ ಒಕ್ಕೂಟ (ರಿ ) ರಾಜ್ಯದ್ಯಕ್ಷರಾದ ಇವರ ಮಾರ್ಗದರ್ಶನದಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಎಮ್ ಕಮ್ಮಾರ್ ಇವರ ಮಾರ್ಗದರ್ಶನದಲ್ಲಿ ಸುರಕ್ಷತೆ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಹಾಗೂ ಯಲಬುರ್ಗಾ ತಾಲೂಕು ಹೋಬಳಿ ಅಧ್ಯಕ್ಷರಾದ ಸಂತೋಷ ತೋಟದ್ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಮಸ್ತ ಗ್ರಾಮಸ್ಥರು ಸಮ್ಮುಖದಲ್ಲಿ ಅರ್ಹ ಫಲಾನುಭವಿಗಳಿಗೆ ಸುರಕ್ಷ ಕಿಟ್ ವಿತರಿಸಲಾಯಿತು . ಗ್ರಾಮದ ಮುಖಂಡರಾದ ಮೈಲಾರಿಗೌಡ ಈರೇಗೌಡ ಹಾಗೂ ಶರಣಯ್ಯ ಶಾಪುರ್ ಕಾಳಪ್ಪ ಬಸಪ್ಪ ಬಡಿಗೇರ್ ಗಂಗಪ್ಪ ಕಮ್ಮಾರ್ ಬಸವರಾಜ್ ಪೋತಿ ಇದ್ದರು.

Leave a Comment

Your email address will not be published. Required fields are marked *

Translate »
Scroll to Top