ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ

ಕೊಪ್ಪಳ : ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ, ಗ್ರಾಮ ಪಂಚಾಯತ ಸೇರಿದಂತೆ ತಾಲೂಕಿನ ನಾನಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಯನ್ನು ನೆಡೆಸಲಾಯಿತು. ಈ ಸದರಿ ಕಾಮಗಾರಿಯನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಲಿ ಕಾರ್ಮಿಕರ ಜೊತೆ ಕೆಲಸವನ್ನು ಮಾಡಿಸದೆ ನೇರವಾಗಿ ಜೆಸಿಬಿ ಮೂಲಕ ಕೆಲಸ ಮಾಡಿದ್ದಾರೆ.

ಸಂಘಟನೆಯ ಮೂಲಕ ಹಾಗೂ ವಿವಿಧ ಟಿ.ವ್ಹಿ ಚಾನಲ್ ಮತ್ತು ಪತ್ರಿಕೆ ವರದಿ ಆದರಿಸಿ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ದೂರ ಸಲ್ಲಿಸಿದ ಬಳಿಕ ಇದರ ಬೇನ್ನಲೆ ಜಿಲ್ಲಾ ಪಂಚಾಯತ ಸಿಓ ತನಿಕಾ ಅಧಿಕಾರಿಗಳನ್ನು ನೇಮಿಸಿ ಈ ತನಿಕಾ ಅಧಿಕಾರಿಗಳಾದ ನಿಂಗಪ್ಪ, ರಶೀದ್, ಕುಮಾರ ಸ್ವಾಮಿ, ಕಾಮಗಾರಿ ಸ್ಥಳಕ್ಕೆ ಪರಿಶೀಲನೆ ‌ನೆಡೆಸಿದ ಬಳಿಕ ಭ್ರಷ್ಟಾಚಾರ ನೆಡೆದಿರುವದಾಗಿ ತಿಳಿಸಿದ್ದಾರೆ ಎಂದು ಸಂಘಟನೆಯ ಮಾನವ ಹಕ್ಕುಗಳ ಕಾನೂನು ಮತ್ತು ಸಾಮಾಜಿಕ ಕಲ್ಯಾಣಾಭಿವೃದ್ಧಿ ತಾಲೂಕು ಅಧ್ಯಕ್ಷ ನಾಗರಾಜ ಭೋವಿ ನಮ್ಮ ವಾಹಿನಿಗೆ ಪೋನ್ ಮೂಲಕ ಮಾತನಾಡಿ ವಾಟ್ಸ್ ಆಫ್ ಮೂಲಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top