ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ನೀಡಿದ ಪ್ರತಿಕ್ರಿಯೆ:

ಬೆಂಗಳೂರು : ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಐಟಿ ಸೆಕ್ಟರ್, ಹೋಟೆಲ್ ಗಳು ಸೇರಿದಂತೆ ಬಹುತೇಕ ವ್ಯವಹಾರಗಳು ಎಸಿಯಲ್ಲಿ ನಡೆಯುತ್ತವೆ. ಅವರ್ಯಾರು ವ್ಯವಹಾರ ಮಾಡುವಂತಿಲ್ಲವೇ? ಎಲ್ಲರೂ ಬಾಗಿಲು ಬಂದ್ ಮಾಡಬೇಕೇ? ರಾಜ್ಯದಲ್ಲಿ ಎಲ್ಲಿ ಸೋಂಕು ಹೆಚ್ಚಾಗಿದೆ? ಇಡೀ ರಾಜ್ಯದ ಆರ್ಥಿಕತೆಯನ್ನೇ ಹಾಳು ಮಾಡಲಾಗುತ್ತಿದೆ. ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡುವಾಗ ದೇಶದ ಎಲ್ಲೆಡೆಯಂತೆ ಮಾಡಬೇಕು. ನಮಗೆ ವಿಶೇಷ ಮಾರ್ಗಸೂಚಿ ರೂಪಿಸಲು ಆಗುವುದಿಲ್ಲ. ಈಗಾಗಲೇ ಯಾರಿಗೆಲ್ಲಾ ನಷ್ಟ ಆಗಿದೆ ಅವರಿಗೆ ಪರಿಹಾರ ನೀಡಬೇಕು. ಇದುವರೆಗೂ ಯಾರಿಗೂ ಪರಿಹಾರ ನೀಡಿಲ್ಲ. ಕೋವಿಡ್ ನಿಂದ ಮೃತಪಟ್ಟ 4 ಲಕ್ಷ ಜನರಲ್ಲಿ ಯಾರಿಗೂ ಪರಿಹಾರ ಕೊಟ್ಟಿಲ್ಲ. ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿಲ್ಲ. ಈಗ ಕೆಲವರು ಉಸಿರಾಡುತ್ತಿದ್ದಾರೆ. ಹೋಟೆಲ್ ಉದ್ಯಮ ನಷ್ಟದಲ್ಲಿದೆ. ಶೇ.90 ರಷ್ಟು ಹೋಟೆಲ್ ಗಳಿಗೆ ಎಸಿ ಅಗತ್ಯ. ಶೇ.20 ರಷ್ಟು ಶಾಲೆಗಳು ಎಸಿಯಲ್ಲೇ ನಡೆಯುತ್ತಿವೆ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ.

ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಸಿಪಿಎಂ, ಜೆಡಿಎಸ್, ರೈತ ಸಂಘ ಎಲ್ಲರ ಮತವನ್ನೂ ಕೇಳುತ್ತೇನೆ. ಮತದಾರರಿಗೆ ಮುಕ್ತ ಮತದಾನದ ಅವಕಾಶವಿದ್ದು, ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಧ್ವನಿಯಾಗಿ, ಅವರ ಪರವಾಗಿ ಕಾಂಗ್ರೆಸ್ ಸದಾ ನಿಂತಿದೆ. ಹೀಗಾಗಿ ಎಲ್ಲರನ್ನು ಮತ ಕೇಳಿದ್ದೇನೆ. ಮೈತ್ರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಜೆಡಿಎಸ್ ತನ್ನ ತೀರ್ಮಾನ ತೆಗೆದುಕೊಂಡಿದೆ. ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಂಡಿದ್ದು, ಧಾರವಾಡ, ಬೀದರ್, ಕಲಬುರ್ಗಿ ಸೇರಿದಂತೆ ಹಲವು ಕಡೆಗಳಲ್ಲಿ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ನಾಯಕರು ಏನೇ ತೀರ್ಮಾನ ಮಾಡಿದರೂ ಆ ಬಗ್ಗೆ ಭಿನ್ನಾಭಿಪ್ರಾಯ ಇದ್ದೇ ಇದೆ. ಯಡಿಯೂರಪ್ಪನವರು ಕಾಂಗ್ರೆಸ್ ಅನ್ನು 25 ವರ್ಷ ವಿರೋಧ ಪಕ್ಷದಲ್ಲಿ ಇಡುತ್ತೇವೆ. ಕಾಂಗ್ರೆಸ್ ಕತೆ ಮುಗಿದಿದ್ದು, ತಾವೇ ಶಾಶ್ವತವಾಗಿ ಇರುತ್ತೇವೆ ಎಂದು ಹೇಳಿದ್ದಾರೆ. ಅರುಣ್ ಸಿಂಗ್ ಹಾಗೂ ಇತರರು ನಮಗೆ ಜೆಡಿಎಸ್ ಬೆಂಬಲ ಬೇಕು ಎಂದು ಹೇಳಿರುವುದು, ಅವರ ಅಸಹಾಯಕತೆ ತೋರಿಸುತ್ತಿದೆ. ತಮ್ಮದು ದುರ್ಬಲ ಪಕ್ಷ ಎಂದು ಬಿಜೆಪಿ ಒಪ್ಪಿಕೊಂಡಿದೆ. ಸಿಎಂ ಹೇಳಿಕೆಯನ್ನೂ ಗಮನಿಸುತ್ತಿದ್ದೇವೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಮರುತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರು ತನಿಖೆ ಮಾಡುತ್ತಿದ್ದಾರೆ. ಅವರ ಕೆಲಸ ಅವರು ಮಾಡಲಿ’ ಎಂದು ಉತ್ತರಿಸಿದರು.

Leave a Comment

Your email address will not be published. Required fields are marked *

Translate »
Scroll to Top