ಜಿಲ್ಲೆಗಳು

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜ್ಯ ಸರಕಾರ

ವಿಜಯನಗರ :ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ರಾಜ್ಯದ 31ನೇ ಜಿಲ್ಲೆ ವಿಜಯನಗರದಲ್ಲಿ ರೂ.464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದರ ಮೂಲಕ ರಾಜ್ಯ ಸರಕಾರ ಮುನ್ನುಡಿ ಬರೆದಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿದ್ಯಾರಣ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಈ ಪ್ರದೇಶಗಳ ಮೇಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು …

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜ್ಯ ಸರಕಾರ Read More »

ಮರುಕಳಿಸಿದ ವಿಜಯನಗರ ವೈಭವ

ವಿಜಯನಗರ : ವಿಜಯನಗರ ಸಾಮ್ರಾಜ್ಯವಾಳಿದ ನೆಲದಲ್ಲಿ ಮತ್ತೆ ವಿಜಯನಗರ ವೈಭವ ಮರುಕಳಿಸಿತು!. ಹೌದು ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ನಡೆದ ವಿಜಯನಗರ ವೈಭವ ಮೆರವಣಿಗೆಯು ನಾಡಿನ ವೈವಿಧ್ಯಮಯ ಕಲೆಯನ್ನು ಅನಾವರಣಗೊಳಿಸಿತು;ಇದರ ಜೊತೆಗೆ ವಿಜಯನಗರ ಅರಸರ ದರ್ಬಾರ್ ಕೂಡ ನೆನಪಿಸಿತು. ನಗರದ ವಡಕರಾಯ ದೇವಸ್ಥಾನದಿಂದ ಮಧ್ಯಾಹ್ನ 3.45ಕ್ಕೆ ಆರಂಭವಾದ ವಿಜಯನಗರ ವೈಭವದ ಮೆರವಣಿಗೆಗೆ ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ …

ಮರುಕಳಿಸಿದ ವಿಜಯನಗರ ವೈಭವ Read More »

ಜನರ ಗಮನಸೆಳೆದ ವಾಸ್ತುಶೈಲಿ,ಕರಕುಶಲ ವಸ್ತುಗಳು

ವಿಜಯನಗರ : ಜೋಗಜಲಪಾತದ ವಿಸ್ಮಯ ನೋಟ, ಪಟ್ಟದ ಕಲ್ಲು, ಕಲ್ಲಿನ ರಥದ ವಿಭಿನ್ನ ಶೈಲಿ, ಚಾಲುಕ್ಯರ ವಾಸ್ತು ಶಿಲ್ಪ, ವಿಶ್ವವಿಖ್ಯಾತ ಚೆನ್ನಪಟ್ಟಣದ ಗೊಂಬೆಗಳು, ನೋಡುಗರ ಕಣ್ಮನ ಸೆಳೆದ ಖ್ಯಾತ ಛಾಯಾಗ್ರಾಹಕರ ಬಣಗಾರರ ಚಿತ್ರಗಳು ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ವಿಜಯನಗರ ಉತ್ಸವದಲ್ಲಿ!. ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಮಳಿಗೆಗಳಲ್ಲಿ ಹಲವಾರು ವಿಶೇಷಗಳು ನೋಡುಗರನ್ನೊಮ್ಮೆ ಮೂಕವಿಸ್ಮಿತರನ್ನಾಗಿಸಿದವು. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ನಂದಿ …

ಜನರ ಗಮನಸೆಳೆದ ವಾಸ್ತುಶೈಲಿ,ಕರಕುಶಲ ವಸ್ತುಗಳು Read More »

ವಿಜಯನಗರ ಜಿಲ್ಲೆ ರಚನೆ ಯಶಸ್ವಿ:ಬೃಹತ್ ಕುಂಡದಲ್ಲಿ ವಿವಿಧ ತಾಲೂಕುಗಳ ಜ್ಯೋತಿ ಪ್ರಜ್ವಲನ

ವಿಜಯನಗರ : ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಅಂಗವಾಗಿ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಹೊತ್ತುತಂದ ಜ್ಯೋತಿಗಳನ್ನು ಹಕ್ಕಬುಕ್ಕ ಮಹಾದ್ವಾರದ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀಕೃಷ್ಣದೇವರಾಯ ಪ್ರತಿಮೆ ಬಳಿಯ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆ,ಕೂಡ್ಲಿಗಿ,ಹಗರಿಬೊಮ್ಮನಹಳ್ಳಿ,ಹಡಗಲಿ,ಹರಪನಹಳ್ಳಿ, ಕೊಟ್ಟೂರು ತಾಲೂಕುಗಳಿಂದ ತಾಲೂಕಾಡಳಿತ ಹಾಗೂ ತಾಲೂಕು ಹೋರಾಟಗಾರರು ಜೊತೆಗೂಡಿ ಹೊತ್ತು ತಂದ ಜ್ಯೋತಿಗಳನ್ನು ಶ್ರೀಕೃಷ್ಣದೇವರಾಯ ಪ್ರತಿಮೆ ಬಳಿಯ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಯಿತು. ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ …

ವಿಜಯನಗರ ಜಿಲ್ಲೆ ರಚನೆ ಯಶಸ್ವಿ:ಬೃಹತ್ ಕುಂಡದಲ್ಲಿ ವಿವಿಧ ತಾಲೂಕುಗಳ ಜ್ಯೋತಿ ಪ್ರಜ್ವಲನ Read More »

ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ – ಶಿವಕುಮಾರ ಮ್ಯಾಗಳಮನಿ

ಕವಿತಾಳ : ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ರಾಯಚೂರು ಜಿಲ್ಲಾ ಸಮಿತಿ ಹಾಗೂ ಕವಿತಾಳ ನಗರ ಘಟಕದ ವತಿಯಿಂದ ಭಗತ್ ಸಿಂಗ್ 114 ನೆಯ ಜನ್ಮ ದಿನಾಚರಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು‌. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿದ ಭಗತ್ ಸಿಂಗ್ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು ಅವರು ಈ ದೇಶ ಕಂಡ …

ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ – ಶಿವಕುಮಾರ ಮ್ಯಾಗಳಮನಿ Read More »

ಸುವರ್ಣ ಅಕ್ಷರದಲ್ಲಿ ಬರೆದಿಡುವಂತೆ ಮಾಡಬೇಕು

ಕುಷ್ಟಗಿ : ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆದು ಪ್ರತಿ ನಿತ್ಯ ನ್ಯೂಸ್ ಪೇಪರ್, 1ನೇ ತರಗತಿಯಿಂದ 10ನೇ ತರಗತಿಯ ವರಗಿನ ಪುಸ್ತಕವನ್ನು ಓದಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಕಡೆ ಗಮನಕೊಟ್ಟು ಪ್ರತಿದಿನ 6 ರಿಂದ 8 ತಾಸು ಓದಿ KAS, IAS, PSI, FDA, TET, CET ಮತ್ತು ಗ್ರುಪ್ C ಉದ್ಯೋಗ ಪಡೆದು ಸರಕಾರಿ ನೌಕರಸ್ಥರಾಗಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂತೆ ಮಾಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಇಲ್ಲಿನ ಸರಕಾರಿ ಪದವಿ ಪೂರ್ವ …

ಸುವರ್ಣ ಅಕ್ಷರದಲ್ಲಿ ಬರೆದಿಡುವಂತೆ ಮಾಡಬೇಕು Read More »

ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ

ಕಾರಟಗಿ : ಹುಳ್ಕಿಹಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲಾ (RMSA) ಯಲ್ಲಿ ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು ನೂತನ ಅಧ್ಯಕ್ಷರಾಗಿ ಸಂಗಪ್ಪ ಜುಮಲಾಪುರ ಉಪಾಧ್ಯಕ್ಷರಾಗಿ ಶಾಹಿನ್ ಬೇಗಂ ಸದಸ್ಯರಾಗಿ ಸುವರ್ಣ ವೀರಾಪುರ ಅಂಬಮ್ಮ ಚಲುವಾದಿ ಮುತ್ತಮ್ಮ ತಳವಾರ ಶಿವರಡ್ಡಿ ಏಡಿಬಾಳ ಪಂಪಾಪತಿ ಉಪ್ಪಾರ ಆಂಜನೇಯ ಚಲುವಾದಿ ಗೋವಿಂದಪ್ಪ ಬಡೀಗೇರ ನಾಮ ನಿರ್ದೇಶನ ಸದಸ್ಯರಾಗಿ ಮಲ್ಲಿಕಾರ್ಜುನ ಯತ್ನಟ್ಟಿ ಸಂಘದ ಪ್ರತಿನಿಧಿಯಾಗಿ ವಿದ್ಯಾಧರ ಪೋಲಿಸ್ ಪಾಟೀಲ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಭೂಷಣ್ ಆಯ್ಕೆ ಮಾಡಲಾಯಿತು.

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ

ದೇವನಹಳ್ಳಿ: ಗಾಂಧಿಯವರ ಜೀವನವೇ ಒಂದು ಸಂದೇಶ ಹಾಗಾಗೀ ಅವರ ತತ್ವ ಆದರ್ಶ ಉಪದೇಶಗಳನ್ನ ಪಾಲಿಸಿ ಅವರ ಕನಸಿನ “ಗ್ರಾಮಸ್ವರಾಜ್ಯದ” ಬಲಿಷ್ಠ ಭಾರತದ ಪುನರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡಲು ಎವಿವಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿ. ಮಂಜುನಾಥ್ ಕರೆ ನೀಡಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಮಹಾತ್ಮಾ ಗಾಂಧಿಯವರ 152 ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 117 ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ …

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ Read More »

ಯೋಗಾ ಕುಟುಂಬದ ವತಿಯಿಂದ ಜನ್ಮ ದಿನಾಚರಣೆ ಆಚರಣೆ

ಇಳಕಲ್ : ಯೋಗಾ ಕುಟುಂಬದ ವತಿಯಿಂದ ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಣೆ. ನಗರದ ಹುಲಗೇರಿ ರಸ್ತೆಯಲ್ಲಿ , ಯೋಗಾ ಕುಟುಂಬದ ಹೊಸ ಜಾಗ ಉದ್ಘಾಟನೆ ಹಾಗು ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗಾ ಕುಟುಬದ ಆಡಳಿತ ಮಂಡಳಿ ಹಾಗು ಸದಸ್ಯರುಗಳು ಪಾಲ್ಗೋಂಡು ಸಸಿ ನೇಡುವದರ ಮೂಲಕ ಆಚರಿಸಲಾಯಿತು.

ಗಾಂಧಿ ಜಯಂತಿ ಆಚರಣೆ

ಕೊಪ್ಪಳ,: ತಾಲೂಕಿನ ಗಿಣಿಗೇರಿ ಗ್ರಾಮದ ನವಚೇತನ ತರುಣ ಸಂಘ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಶನಿವಾರ ದಂದುಆಚರಿಸಲಾಯಿತು. ಬಿಜೆಪಿ ಮುಖಂಡ ಅಮರೇಶ ಕರಡಿ ಅವರು ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪವನ್ನು ಅರ್ಪಿಸುವುದರ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಿಣಗೇರಿ ಗ್ರಾಮದ ಕೊಟ್ರಬಸಯ್ಯ ಸ್ವಾಮಿ,ಕರಿಯಪ್ಪ ಮೇಟಿ, ಮಂಜುನಾಥ ಪಾಟೀಲ್, ಯಮನೂರಪ್ಪ ಕಟ್ಟಿಗಿ, ಪಾಂಡು ಹಲಗೇರಿ, ಚಂದ್ರು ಲಮಾಣಿ, ಶಂಕರಗೌಡ ಪೋಲೀಸ್ ಪಾಟೀಲ್, ನಾಗರಾಜ ಧರ್ಮನಗೌಡ್ರು, ಶಂಕರ್ ನಾಯಕ, ಶ್ರೀನಿವಾಸ ಪೂಜಾರ, ಫಕೀರಸ್ವಾಮಿ …

ಗಾಂಧಿ ಜಯಂತಿ ಆಚರಣೆ Read More »

Translate »
Scroll to Top