ಬೆಂಗಳೂರು ಗ್ರಾಮಾಂತರ

ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ! ಎಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ವಿದ್ಯಾರ್ಥಿಗಳಿಗೆ ಕಲಿಕೆಯ ಉಪಯೋಗವೂ ತಿಳಿದಿರಲಿ ಎಸ್. ಕೃಪಾಶಂಕರ್

ದೇವನಹಳ್ಳಿ: ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳಿಸಿ ಯಶಸ್ಸು ಗಳಿಸಿದ ಕೀರ್ತಿ ವಿದ್ಯಾರ್ಥಿಗಳಿಗೇ ಸಲ್ಲಬೇಕು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಗತಿ ಕಾಲೇಜು ವತಿಯಿಂದ ಸ್ಕಾಲರ್ ಶಿಪ್ ನೀಡಿ ಪ್ರೋತ್ಸಾಹ ನೀಡುವುದಾಗಿ ಪ್ರಗತಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಂ. ಸತೀಶ್ ಕುಮಾರ್ ತಿಳಿಸಿದರು. ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಪ್ರೌಢಶಾಲಾ ವತಿಯಿಂದ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, …

ವಿದ್ಯಾರ್ಥಿಗಳಿಗೆ ಕಲಿಕೆಯ ಉಪಯೋಗವೂ ತಿಳಿದಿರಲಿ ಎಸ್. ಕೃಪಾಶಂಕರ್ Read More »

ಸಾಧನೆಗೊಂದು ಸಲಾಂ: ಪ್ರಗತಿ ಶಾಲೆಯ ವಿದ್ಯಾರ್ಥಿನಿ ಚೈತನ್ಯ ಗೆ ಅಭಿನಂದನೆಗಳ ಸುರಿಮಳೆ

ದೇವನಹಳ್ಳಿ: 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿದ್ದು, ನಮ್ಮ ಪ್ರಗತಿ ಶಾಲೆಗೆ ಇದೇ ಪ್ರಥಮ ಬಾರಿಗೆ ವಿದ್ಯಾರ್ಥಿನಿ ಚೈತನ್ಯ 625 ಕ್ಕೆ 625 ಅಂಕ ಗಳಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಗತಿ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಸ್. ಕೃಪಾಶಂಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪ್ರಗತಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿ ಚೈತನ್ಯಳಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿನಿಯ ಸಾಧನೆಯ ಹಿಂದೆ ಶಿಕ್ಷಕರ ಮತ್ತು ಪೋಷಕರ …

ಸಾಧನೆಗೊಂದು ಸಲಾಂ: ಪ್ರಗತಿ ಶಾಲೆಯ ವಿದ್ಯಾರ್ಥಿನಿ ಚೈತನ್ಯ ಗೆ ಅಭಿನಂದನೆಗಳ ಸುರಿಮಳೆ Read More »

ವೈದ್ಯರು ಮತ್ತು ದಾದಿಯರದು ನಿಸ್ವಾರ್ಥ ಸೇವೆ

ದೇವನಹಳ್ಳಿ: ಹಗಲು ರಾತ್ರಿ ಎನ್ನದೆ, ರೋಗಿಗಳ ಸೇವೆ ಮಾಡುವ ನರ್ಸ್​ ಗಳ ಸೇವೆ ನಿಜಕ್ಕೂ ಶ್ಲಾಘನೀಯ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಅಲ್ಲಿ ವೈದ್ಯರಷ್ಟೇ ರೋಗಿಗಳನ್ನು ಶುಶ್ರೂಷೆ ಮಾಡುವವರು ದಾದಿಯರು. ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಸಮಯದಲ್ಲಿ ನರ್ಸ್​ಗಳು ತಮ್ಮ ಜೀವದ ಹಂಗನ್ನು ತೊರೆದು ಸೋಂಕಿತರ ಸೇವೆ ಮಾಡಿದ್ದರು. ಇಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯಾದ್ದರಿಂದ ಅವರಿಗೊಂದು ಗೌರವ ಸಮರ್ಪಣೆ ಮಾಡುತ್ತಿರುವುದಾಗಿ ಪಟ್ಟಣದ ಸುವೀಕ್ಷ ಆಸ್ಪತ್ರೆಯ ವೈದ್ಯರಾದ ಡಾ. ಕವಿತ ನಟರಾಜ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸುವೀಕ್ಷ ಆಸ್ಪತ್ರೆಯ …

ವೈದ್ಯರು ಮತ್ತು ದಾದಿಯರದು ನಿಸ್ವಾರ್ಥ ಸೇವೆ Read More »

ಗಂಗಮ್ಮ ತಾಯಿ ದರ್ಶನ ಪಡೆದ ಸಹಸ್ರಾರು ಭಕ್ತರು

ದೇವನಹಳ್ಳಿ: ಊರ ಕಾಯುವ ದೇವತೆ, ಇಷ್ಟಾರ್ಥ ಸಿದ್ಧಿಯ ಗಂಗಮ್ಮ ತಾಯಿಯ 52 ನೇ ಜಾತ್ರಾ ಮಹೋತ್ಸವ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವಕ್ಕೆ ಮೇ 3 ನೇ ತಾರೀಖಿನಿಂದಲೇ ಹಲವಾರು ಪೂಜಾ ವಿಧಿ ವಿಧಾನಗಳು ಆರಂಭಗೊಂಡು, ಪ್ರತಿ ನಿತ್ಯ ತಾಯಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಮೇ. 10 ರ ಬೆಳಗ್ಗೆ ಗಂಗಮ್ಮ ತಾಯಿಯ 52 ನೇ ವರ್ಷದ ಜಾತ್ರಾ ಮಹೋತ್ಸವ ಸಂಪ್ರದಾಯ ಬದ್ಧವಾಗಿ ನೆರವೇರಿತು. ಊರಿಗೇ ಊರೇ ಹಬ್ಬ …

ಗಂಗಮ್ಮ ತಾಯಿ ದರ್ಶನ ಪಡೆದ ಸಹಸ್ರಾರು ಭಕ್ತರು Read More »

ತಿಗಳ ಜನಾಂಗದ ಬಗ್ಗೆ ಕಡೆಗಣನೆ ಬೇಡ: ಸಿ. ಜಯರಾಜ್

ದೇವನಹಳ್ಳಿ : ನಮ್ಮಲ್ಲೇ ಜಾತಿ ಪಂಗಡಗಳನ್ನು ವಿಂಗಡಿಸದೆ ತಿಗಳರೆಂದರೆ ಎಲ್ಲರೂ ಒಂದೇ ಎಂದು ಹೇಳಬೇಕು. ಸರ್ಕಾರ ಹಾಗೂ ರಾಜಕಾರಣಿಗಳು ಸಂಘಟನೆಗೆ ಕೊಡುವ ಬೆಲೆಯೇ ಬೇರೆ. ಆದ್ದರಿಂದ ನಾವು ಒಗ್ಗಟ್ಟಾಗಿರಬೇಕು ಎಂದು ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಬಿಜ್ಜವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾ ಸಂಸ್ಥಾನ ಪೀಠದ ಆಶ್ರಮದಲ್ಲಿ ಹಾಗೂ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಎಸ್. ದೇವರಾಜ್ ರವರ ನೇತೃತ್ವದಲ್ಲಿಜೆ.ಆರ್.ಮುನಿವೀರಣ್ಣ ಸಂಪಾದಕತ್ವದ ತಿಗಳ ವೈಭವ ಮಾಸ …

ತಿಗಳ ಜನಾಂಗದ ಬಗ್ಗೆ ಕಡೆಗಣನೆ ಬೇಡ: ಸಿ. ಜಯರಾಜ್ Read More »

ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಕಾಂಗ್ರೆಸ್ ಎ.ಸಿ.ಶ್ರೀ ನಿವಾಸ್

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಸೋಲೂರು ಗ್ರಾಮದ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯಾಗಿ ಮರು ಆಯ್ಕೆಯಾದ ಎ.ಸಿ.ಶ್ರೀನಿವಾಸ್ ರವರಿಗೆ ಕುಂದಾಣ ಹೋಬಳಿಯ ಕುರುಬ ಸಮುದಾಯದ ವತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಎರಡು ಶಕ್ತಿಯಿದ್ದಂತೆ ಇವರ ಒಗ್ಗಟ್ಟಿನ ಮಂತ್ರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಬಲಗೊಳ್ಳುತ್ತಿರುವುದನ್ನು ವಿರೋದ ಪಕ್ಷ ಸಹಿಸದೇ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ರವರ ಶಕ್ತಿ ಮತ್ತು ಸಿದ್ದರಾಮಯ್ಯನವರ ಯುಕ್ತಿಯಿಂದ ರಾಜ್ಯದಲ್ಲಿ ಮತ್ತು ದೇವನಹಳ್ಳಿ …

ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಕಾಂಗ್ರೆಸ್ ಎ.ಸಿ.ಶ್ರೀ ನಿವಾಸ್ Read More »

ರಾಜ್ಯಕ್ಕೆ ಮತ್ತೊಮ್ಮೆ ಜೆಡಿಎಸ್ ಆಡಳಿತದ ಅಗತ್ಯವಿದೆ

ದೇವನಹಳ್ಳಿ: ಎರಡು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ದಿಂದ ನಮ್ಮ ರಾಜ್ಯದ ನದಿಗಳ ನೀರನ್ನು ನಾವೇ ಉಪಯೋಗಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಜನರು ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟವನ್ನು ಎದುರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜ್ಯದ ಜನತೆ ಬಗ್ಗೆ ಕಳವಳ ವ್ಯಕ್ತ ಪಡಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರದ ಜ್ಯೂನಿಯರ್ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಾದ್ಯಂತ ಜನತಾ ಜಲಾಧಾರೆ ಪ್ರಾರಂಭವಾಗಿದ್ದು ಇದು ರೈತರ ಪರವಾಗಿ ನಡೆಯುತ್ತಿರುವ ಹೋರಾಟ. …

ರಾಜ್ಯಕ್ಕೆ ಮತ್ತೊಮ್ಮೆ ಜೆಡಿಎಸ್ ಆಡಳಿತದ ಅಗತ್ಯವಿದೆ Read More »

ರೈತರ ಅನುಕೂಲಕ್ಕೆ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು

ದೇವನಹಳ್ಳಿ: ಸರ್ಕಾರದಿಂದ ದೊರೆಯುವ ಅನುದಾನಗಳು ಸಾರ್ವಜನಿಕರಿಗೆ ಹಾಗೂ ರೈತರಿಗೆ ಹೆಚ್ಚು ಅನುಕೂಲವಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಐಬಸಾಪುರ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ 3 ಚೆಕ್ ಡ್ಯಾಂ ಗಳು ಪೂರ್ಣಗೊಂಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸುಮಾರು 25 ಕೋಟಿ ಚೆಕ್ ಡ್ಯಾಂ ಮತ್ತು ಕೆರೆ ಅಭಿವೃದ್ಧಿ ಗೆ ಹಣ ಬಿಡುಗಡೆ ಆಗಿತ್ತು. ಈಗಿನ ಸರ್ಕಾರ ಅದನ್ನು ತಡೆ ಹಿಡಿದಿತ್ತು. ಈಗ …

ರೈತರ ಅನುಕೂಲಕ್ಕೆ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು Read More »

ನಾಯಕರಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ

ದೇವನಹಳ್ಳಿ: ದೇಶದ ಒಂದೊಂದು ರಾಜ್ಯವು ಕಾಂಗ್ರೆಸ್ ಮುಕ್ತವಾಗುತ್ತಾ ಬರುತ್ತಿದೆ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಹೋಗುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಬಸವೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ  ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರಿಯಾದ ನಾಯಕತ್ವವಿಲ್ಲದ ಪಕ್ಷ. ಇಂತಹ ಪಕ್ಷಗಳು ಎಂದೂ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ವಿಲ್ಲ. ಇಡೀ ದೇಶವನ್ನು ಬಿಜೆಪಿಮಯವನ್ನಾಗಿ ಮಾಡುವ …

ನಾಯಕರಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ Read More »

Translate »
Scroll to Top