ಬೆಂಗಳೂರು, ಡಿ, 13; ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದಲ್ಲಿ ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ನಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ವಿತರಣಾ ಕಾರ್ಯಕ್ರಮವನ್ನು ಅಂತರಾಷ್ಟೀಯ ಕ್ರೀಡಾಪಟು ,ಅರ್ಜುನ ಪ್ರಶಸ್ತಿ ಪುರಸ್ಕೃತರಾದ ರೀತಾ ಅಬ್ರಹಾಂ ಉದ್ಘಾಟಿಸಿದರು.
![](http://www.kannadanadunews.in/wp-content/uploads/2021/12/WhatsApp-Image-2021-12-13-at-7.02.13-PM-1024x676.jpeg)
ವೆಲ್ ನೆಸ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ರೀತಾ ಅಬ್ರಹಾಂ, ಮನುಷ್ಯರಿಗೆ ಕಣ್ಣಿನ ಜೊತೆಯಲ್ಲಿ ಕಿವಿಯೂ ಸಹ ಮುಖ್ಯ. ಎಲ್ಲರು ಮಾತನಾಡುವುದನ್ನು ಕೇಳಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ .ವಿಜ್ಞಾನ ,ತಂತ್ರಜ್ಞಾನ ಅಭಿವೃದ್ದಿ ಹೊಂದಿದೆ . ಶ್ರವಣ ದೋಷ ಇರುವವರು ಶ್ರವಣ ಸಾಧನ ಬಳಸಿ ಜೀವನದಲ್ಲಿ ಖುಷಿಯಾಗಿರಿ ಎಂದು ಕಿವಿ ಮಾತು ಹೇಳಿದರು.
![](http://www.kannadanadunews.in/wp-content/uploads/2021/12/WhatsApp-Image-2021-12-13-at-7.02.11-PM-1024x960.jpeg)
ವೆಲ್ ನೆಸ್ ಕ್ಲಿನಿಕ್ ನಿರ್ದೇಶಕರಾದ ಕಮಲ್ ಜಿತ್ ಸಿಂಗ್ ಮಾತನಾಡಿ, ಹಿಯರಿಂಗ್ ವೆಲ್ ನೆಸ್ ಕ್ಲಿನಿಕ್ ಯಲಹಂಕ ಮತ್ತು ಆರ್.ಟಿ.ನಗರದಲ್ಲಿ ಶಾಖೆ ಹೊಂದಿದೆ ರಾಜ್ಯದಲ್ಲಿ 17ಕ್ಲಿನಿಕ್ ಹೊಂದಿದೆ. 100ಜನರಿಗೆ ಶ್ರವಣದೋಷವಿದ್ದರೆ ಇಬ್ಬರು ಮಾತ್ರ ಶ್ರವಣ ಸಾಧನ ಬಳಸುತ್ತಾರೆ ಎಂದರು.
![](http://www.kannadanadunews.in/wp-content/uploads/2021/12/WhatsApp-Image-2021-12-13-at-7.02.12-PM-1024x668.jpeg)
ಕಿವಿ ಶಾಶ್ವತವಾಗಿ ಕೇಳಿಸದೇ ಇರುವವರು ನಮ್ಮ ಕ್ಲಿನಿಕ್ ಬಂದರೆ ಶ್ರವಣ ತಜ್ಞರಿಂದ ಪರೀಕ್ಷೆ ಮಾಡಿ ,ಶ್ರವಣ ಸಾಧನ ಕೊಡಲಾಗುತ್ತದೆ. ತಂತ್ರಜ್ಞಾನದಲ್ಲಿ ಮುಂದುವರೆದಿದ್ದು ಎಲ್ಲರಿಗೂ ಮಾತಗಳನ್ನು ಹೇಳುವ ಅವಕಾಶ ಆಧುನಿಕ ತಂತ್ರಜ್ಞಾನದಿಂದ ಲಭಿಸಿದೆ ಎಂದರು.