ಪತ್ನಿಯನ್ನು ಕೊಲೆ ಮಾಡಿ ಮಾತೇ ಆಡುತ್ತಿಲ್ಲ ಎಂದು ಗೋಳಾಡಿ ಹೈಡ್ರಾಮಾ ಮಾಡಿದ ಪತಿ

ಬೆಂಗಳೂರು: ನಗರದ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ನಂತರ ಆಕೆ ಮಾತೆ ಆಡುತ್ತಿಲ್ಲ ಎಂದು ಗೋಳಾಡಿ ಹೈಡ್ರಾಮ ಮಾಡಿದ್ದು ನಂತರ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. 

ಶರತ್ ಎಂಬ ಆರೋಪಿಯು ತನ್ನ ಪತ್ನಿಯಾದ ಪ್ರಿಯಾಳನ್ನು ಕೊಲೆಗೈದು ನಂತರ ಪತ್ನಿ ಮಾತನಾಡುತ್ತಿಲ್ಲ ಎಂದು ಗೋಳಾಡುತ್ತಾ ಆಸ್ಪತ್ರೆಗೆ ಮೃತ ದೇಹವನ್ನು ಕೊಂಡೊಯ್ದಿದ್ದಾನೆ. ಗಂಡನ ಗೋಳಾಟವನ್ನು ನಾಟಕವೆಂದು ಅರಿಯದ ವೈದ್ಯರು ಮೊದಲು ಚಿಕಿತ್ಸೆ ನೀಡಲು ಮುಂದಾಗಿದ್ದು ತಪಾಸಣೆ ನಡೆಸಿದ ಬಳಿಕ ಮಹಿಳೆ ಸಾವನ್ನಪ್ಪಿರುವ ವಿಚಾರವನ್ನು ಪತಿಗೆ ತಿಳಿಸಿದಾಗ ಆತ ಕಣ್ಣೀರು ಹಾಕಿ ಹೈಡ್ರಾಮ ಮಾಡಿದ್ದಾನೆ.

 

ಈ ಘಟನೆಯ ಹಿನ್ನೆಲೆಯೇನೆಂದರೆ ಶರತ್ ಗೆ ಈಗಾಗಲೇ ಮದುವೆಯಾಗಿದ್ದು ಪ್ರಿಯಾಳನ್ನು ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿ ಪ್ರಿಯ ತನ್ನ ಪತಿಯೊಂದಿಗೆ ಆಗಾಗ ಮೊದಲ ಪತ್ನಿಯ ಮನೆಗೆ ಹೋಗ್ತೀಯ ಅಂತ ಜಗಳವಾಡುತ್ತಿದ್ದು ಈ ಜಗಳವೂ ಅತಿರೇಕಕ್ಕೆ ತಿರುಗಿ ಶರತ್ ಪ್ರಿಯಾಳಿಗೆ ಥಳಿಸಿದ್ದಾನೆ. ಹೊಡೆದ ರಭಸಕ್ಕೆ ಪ್ರಿಯ ಮೃತಪಟ್ಟಿದ್ದು ನಂತರ ಶರತ್ ಈ ಪ್ರಕರಣವನ್ನು ಮುಚ್ಚಿಡಲು ಆಸ್ಪತ್ರೆಗೆ ಕರೆದೊಯ್ದು ನಾಟಕ ಮಾಡಿದ್ದಾನೆ.

ಮೊದಲು ಈ ಪ್ರಕರಣವನ್ನು ಯಶವಂತಪುರ ಪೊಲೀಸರು ಅನುಮಾನಸ್ಪದ ಸಾವು ಎಂದು ಕೇಸ್ ದಾಖಲಿಸಿದ್ದು ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಎರಡು ದಿನಗಳ ಬಳಿಕ ಪತ್ನಿಯನ್ನ ತಾನೇ ಕೊಲೆ ಮಾಡಿ ಶವದೊಂದಿಗೆ ಆಸ್ಪತ್ರೆಗೆ ಬಂದು ನಾಟಕ ಮಾಡಿರುವುದು ಎಂಬ ಅಸಲಿ ವಿಚಾರ ಗಮನಕ್ಕೆ ಬಂದಿದೆ.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top