ನಿರ್ದೇಶಕ ಮಂಜನಾಥ ಜೊತೆ ಹೆಸರಿಡದ ಹೊಸ ಚಿತ್ರದಲ್ಲಿ ರವಿಚಂದ್ರನ್ ಪುತ್ರ ವಿಕ್ರಂ !

Kannada Nadu
ನಿರ್ದೇಶಕ ಮಂಜನಾಥ ಜೊತೆ  ಹೆಸರಿಡದ ಹೊಸ ಚಿತ್ರದಲ್ಲಿ  ರವಿಚಂದ್ರನ್ ಪುತ್ರ ವಿಕ್ರಂ  !

ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಎರಡನೇ ಸಿನಿಮಾ ‘ಮುಧೋಳ್’ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನೂ ಕೇವಲ 10 ರಿಂದ 14 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಈ ನಡುವೆ ನಟ ಮಂಜುನಾಥ್ ರೆಡ್ಡಿ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರಕ್ಕೆ ಈಗಾಗಲೇ ಕ್ಯಾಮೆರಾ ಎದುರಿಸುತ್ತಿದ್ದಾರೆ.

“ನನ್ನ ಕೈಯಲ್ಲಿ ಪ್ರಸ್ತುತ ಮೂರು ಚಿತ್ರಗಳಿವೆ. ಎಲ್ಲವೂ ಹೊಸ ನಿರ್ದೇಶಕರು ಮತ್ತು ಹೊಸ ಕಥೆಗಳಾಗಿವೆ. ಅದರಲ್ಲಿ ಒಂದನ್ನು ಮಂಜುನಾಥ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರನ್ನು ಶೀಘ್ರದಲ್ಲೇ ಘೋಷಿಸುತ್ತೇವೆ. ಮೂರನೇ ಸಿನಿಮಾದ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ ಎಂದು ವಿಕ್ರಮ್ ತಿಳಿಸಿದರು.

ಒಂದು ವರ್ಷದಿಂದ ಸ್ನಾಯು ಎಳೆತ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ಎರಡೂ ಭುಜಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಅದಕ್ಕೂ ಮುನ್ನಾ ಶೂಟಿಂಗ್ ಮುಗಿಸಲು ಪರ್ಯಾಯ ಮಾರ್ಗ ಹುಡುಕುತ್ತಿರುವುದಾಗಿ ಅವರು ಹೇಳಿದರು

ಸಂಭಾವನೆ ಹೊರತಾಗಿ ವೃತ್ತಿಪರತೆಗೆ ಬದ್ಧತೆ ದೃಢವಾಗಿ ಉಳಿದಿದೆ. ನೆಲ್ಸನ್‌ ಚಿತ್ರದಲ್ಲಿ ಒಂದು ಪಾತ್ರವಿದ್ದರೂ ಆ ಪ್ರಾಜೆಕ್ಟ್ ಸದ್ಯ ಸ್ಥಗಿತಗೊಂಡಿದೆ. ಮೂರು ನಿರ್ಮಾಪಕರಿಗೆ ಮುಂಗಡ ಹಣವನ್ನು ಹಿಂದಿರುಗಿಸಿದ್ದೇನೆ. ನನ್ನಗೆ ಪಾತ್ರ ಹೊಂದಿಕೆಯಾಗದಿದ್ದರೆ ನಿರ್ಮಾಪಕರ ಹಣ ದುರುಪಯೋಗವಾಗಲು ಬಯಸುವುದಿಲ್ಲ. ಪ್ರತಿಯೊಂದು ಪ್ರಾಜೆಕ್ಟ್ ಗೂ ಸೂಕ್ತ ಸಮಯ ಮತ್ತು ಶ್ರಮವನ್ನು ಗೌರವಿಸುತ್ತೇನೆ ಎನ್ನುತ್ತಾರೆ ವಿಕ್ರಮ್.

ಮಂಜುನಾಥ್ ರೆಡ್ಡಿ ಅವರ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಕಮರ್ಷಿಯಲ್ ಸಿನಿಮಾವಾಗಿದೆ. ಆದರೆ ಪೌರಾಣಿಕ ಹಿನ್ನೆಲೆಯ ಕಥಾಹಂದರವೂ ಇದೆ. ಹೊಸ ಪ್ರಕಾರದ ಚಿತ್ರಗಳಲ್ಲಿ ಅಭಿನಯಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ಅವರು ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";