ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಿಗೆ ಜನದಿನದ ಶುಭಾಶಯ ಕೋರಿದ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಭಾರತದ ಉಪರಾಷ್ಟ್ರಪತಿಗಳಾದ ಜಗದೀಪ್‌ ಧನ್ಕರ್‌ ಅವರು ಜನದಿನದ ಶುಭಾಶಯ ಕೋರಿದ್ದಾರೆ.

ಉಪರಾಷ್ಟ್ರಪತಿಗಳು ಡಿ.ಕೆ.ಶಿವಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ಜತೆಗೆ ಅವರಿಗೆ ಶುಭಾಶಯ ಪತ್ರವನ್ನೂ ಬರೆದಿದ್ದಾರೆ.ಡಿ.ಕೆ. ಶಿವಕುಮಾರ್‌ ಅವರಿಗೆ ಜನದಿನದ ಶುಭಾಶಯಗಳು. ದೇಶದ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿರುವ ತಮಗೆ ದೇವರು ಸಂತೋಷ, ಆರೋಗ್ಯ ಹಾಗೂ ಸುದೀರ್ಘ ಲಪ್ರದಾಯಕ ಜೀವನವನ್ನು ನೀಡಲಿ ಎಂದು ಜಗದೀಪ್‌ ಧನ್ಕರ್‌ ಅವರು ಪತ್ರದ ಮೂಲಕ ಹಾರೈಸಿದ್ದಾರೆ.

ಉಪರಾಷ್ಟ್ರಪತಿಗಳ ಶುಭಕಾಮನೆಗೆ ಧನ್ಯವಾದ ತಿಳಿಸಿ ಶಿವಕುಮಾರ್‌ ಅವರು ಕೂಡ ಪತ್ರ ಬರೆದಿದ್ದು, ನನ್ನ ಜನದಿನದ ಅಂಗವಾಗಿ ನಿಮ ಶುಭಾಶಯ ಪಡೆದು ಸಂತೋಷವಾಗಿದೆ. ನಿಮ ಬಿಡುವಿಲ್ಲದ ವೇಳಾಪಟ್ಟಿ ನಡುವೆ ನೀವು ನನ್ನನ್ನು ನೆನಪಿಸಿಕೊಂಡು ಶುಭಾಶಯ ಕೋರಿದ್ದೀರಿ.

 

ನಿಮ್ಮ ನಿರೀಕ್ಷೆಯಂತೆ ನನ್ನ ಜೀವನವನ್ನು ಜನ ಸೇವೆಗೆ ಮುಡುಪಿಡುತ್ತೇನೆ. ಇದಕ್ಕೆ ನಿಮ ಆಶೀರ್ವಾದವನ್ನು ಬಯಸುತ್ತೇನೆ ಎಂದು ಶಿವಕುಮಾರ್‌ ಅವರು ತಿಳಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top