ತೂಬಗೆರೆಯ ವೆಂಕಟೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ವೀರಪ್ಪ ಮೊಯ್ಲಿ ಹಾಗೂ ರಕ್ಷಾ ರಾಮಯ್ಯ ಭಾಗಿ

ಬೆಂಗಳೂರು:  ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ ಟಿಕೆಟ್ ವಿಚಾರದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಪರಸ್ಪರ ಮುಖಾಮುಖಿಯಾದರು.

 

ಅಷ್ಟೇ ಅಲ್ಲದೇ ಇಬ್ಬರೂ ಕೈ ಕುಲುಕಿ ಸೌಹಾರ್ದಯುತವಾಗಿ ಯೋಗಕ್ಷೇಮ ವಿಚಾರಿಸಿದರು.

ವಿಶೇಷ ಎಂದರೆ ಈ ಇಬ್ಬರೂ ಮುಖಂಡರು ದೇವನಹಳ್ಳಿ ತಾಲ್ಲೂಕಿನ  ಮಾಡಿ ತೂಬಗೆರೆ  ಹೋಬಳಿಯ ವೆಂಕಟೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಒಟ್ಟಿಗೆ ತೇರು [ರಥ] ಎಳೆದು ದೇವರ ಕೃಪೆಗೆ ಪಾತ್ರರಾದರು.

 

ಸ್ವತಃ ವೀರಪ್ಪ ಮೊಯ್ಲಿ ಅವರೇ ರಕ್ಷಾ ರಾಮಯ್ಯ ಅವರನ್ನು ವೆಂಕಟೇಶ್ವರ ಸನ್ನಿಧಿಗೆ ಕರೆದೊಯ್ದುರು. ಇಬ್ಬರೂ ಮುಖಂಡರು ಒಟ್ಟಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯವರು ಉಭಯ ನಾಯಕರಿಗೆ ಹಾರ ಹಾಕಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಬ್ಲಾಕ್ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ಮುಖಂಡರು. ಕಾರ್ಯಕರ್ತರು  ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top