ಹೊಸಪೇಟೆ: ಹುಬ್ಬಳ್ಳಿ ಗಲಭೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿ.ಕಾನೂನು ಕೈಗೆತ್ತಿಕೊಳ್ಳುವರನ್ನು ಬಿಡುವ ಮಾತೇ ಇಲ್ಲ.
ನಿನ್ನೆ ರಾತ್ರಿ ಒಬ್ಬ ಯುವಕ ತನ್ನ ಮೊಬೈಲ್ ವಾಟ್ಸಪ್ ನಲ್ಲಿ ಸ್ಟೇಟಸ್ ವಿವಾದಿತ ಪೋಸ್ಟ್ ಹಾಕಿದ್ದಾರೆ. ಅದರಿಂದ ಗಲಾಟೆ ಆರಂಭವಾಗಿದೆ, ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ.
ಈಗಾಗಲೇ ಪೋಸ್ಟ್ ಹಾಕಿದ ವ್ಯಕ್ತಿ ಸೇರಿದಂತೆ ಹಲವರ ಬಂಧನವಾಗಿದೆ. ಯಾವುದೇ ಧರ್ಮದವರಾಗಲಿ ಅವರನ್ನು ಬಿಡಯವ ಮಾತೇ ಇಲ್ಲ. ಇದೊಂದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಾಣುತ್ತೆ. ನನಗೆ ಬಂದ ಮಾಹಿತ ಪ್ರಕಾರ ಅಲ್ಲಿ ಮೊದಲೇ ಕಲ್ಲು ಸಂಗ್ರಹ ಮಾಡಿದ್ದಾರೆ. ಇದೊಂದು ವ್ಯವಸ್ಥಿತ ಸಂಚು ಎಂದು ಕಾಣಿಸುತ್ತೆ ಎಂದರು. ನಾಲ್ಕು ಜನ ಪೊಲೀಸ್ ಹಾಗು ಕೆಲ ಸಿಬ್ಬಂದಿಗೆ ಗಾಯ ಆಗಿದೆ . ಓರ್ವ ಪಿಎಸ್ಐ ಅವರಿಗೆ ಗಂಭೀರ ಗಾಯ ಆಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆ ಗೆ ದಾಖಲು ಮಾಡಲಾಗಿದೆ.ಕೆಜೆ ಹಳ್ಳಿ ಡಿಜೆ ಹಳ್ಳಿ ಮಾದರಿಯಲ್ಲಿ ಗಲಾಟೆ ಮಾಡಲು ಮುಂದಾಗಿದ್ದರು.ಹೆಚ್ಚಿನ ಪೋರ್ಸ್ ನಿಯೋಜನೆ ಮಾಡಲಾಗಿದೆಂದರು.