ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ರೈತ ತಿಪ್ಪಣ್ಣ ಎಂಬುವವರಿಗೆ ಸೇರಿದ ಕುರಿಯನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ವರದಿಯಾಗಿದೆ.
ಹಾಡಹಗಲಲ್ಲೇ ಚಿರತೆ ಕುರಿಯೊಂದನ್ನು ಹೊತ್ತೊಯ್ದು ಬಗೆದು ತಿನ್ನುತ್ತಿರುವ ದೃಶ್ಯಗಳನ್ನು ಸ್ಥಳೀಯ ಕೆಲವರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದು ವೈರಲ್ ಆಗಿದೆ.
ಕುರಿಗಾಹಿ ಕುರಿ ಕಾಯುವ ವೇಳೆ ಚಿರತೆ ದಾಳಿ ಮಾಡಿ, ಕುರಿಯನ್ನು ಹೊತ್ತೊಯ್ದು ತಿಂದು ಹಾಕಿದೆ. ಇದನ್ನು ಕಂಡು ಕುರಿಗಾಹಿ ಗಲಾಟೆ ಮಾಡುತ್ತಿದ್ದ ಹಾಗೆ ಚಿರತೆ ಕಾಲ್ಕಿತ್ತಿದೆ. ಇದರಿಂದಾಗಿ ದೇವಲಾಪುರ ಕುರಿಗಾಹಿಗಳು ಅರಣ್ಯ ಪ್ರದೇಶಕ್ಕೆ ಕುರಿಗಳನ್ನ ಕೊಂಡೊಯ್ಯಲು ಭಯ ಪಡುತ್ತಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯವರಿಗೆ ಚಿರತೆಯನ್ನ ಸೆರೆಹಿಡಿಯುವಂತೆ ದೇವಲಾಪುರ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
Facebook
Twitter
LinkedIn
WhatsApp
Email
Print
Telegram