ಕಳೆದ ಮೂರು ತಿಂಗಳಿಂದ ರೈತರಿಗೆ ಆತಂಕ ತಂದಿಟ್ಟಿದ್ದ ಚಿರತೆ ಸೆರೆಯಾಗಿದೆ

ಚಿಕ್ಕನಾಯಕನಹಳ್ಳಿ: ಕಳೆದ ಮೂರು ತಿಂಗಳಿಂದ ರೈತರಿಗೆ ಆತಂಕ ತಂದಿಟ್ಟಿದ್ದ ಚಿರತೆ ಇಂದು ಸೆರೆಯಾಗಿದೆ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಅಗಸ್ರಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಮೂರು ಚಿರತೆಗಳು ಓಡಾಡಿಕೊಂಡಿದ್ದು ಸುಮಾರು 30ಕ್ಕೂ ಹೆಚ್ಚು ಕುರಿ ನಾಯಿಗಳನ್ನು ತಿನ್ನುವ ಮೂಲಕ ರೈತರಲ್ಲಿ ಆತಂಕ ನಿರ್ಮಾಣವಾಗಿತ್ತು.

ಅಗಸರಹಳ್ಳಿಯಿಂದ ತಿಂಡಿಗಲ್ ಬಾರೆಗೂ ಎಲ್ಲಿಗೋ ನಿರಾತಂಕವಾಗಿ ಓಡಾಡಿಕೊಂಡಿದ್ದ ಮೂರು ಚಿರತೆಗಳಿಂದಾಗಿ ಜನ ಜಾನುವಾರುಗಳಿಗೂ ಭಯದಿಂದಾಗಿ ಈ ಮಾರ್ಗದಲ್ಲಿ ಜನರು ಓಡಾಡುವ ಸ್ಥಿತಿ ಇಲ್ಲವಾಗಿತ್ತು. ಇವುಗಳ ಆತಂಕದಿಂದ ಬೇಸತ್ತಿದ್ದ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನ ಮೇರೆಗೆ ಕಳೆದ ನಾಲ್ಕು ದಿನಗಳಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸುಮಾರು ನಾಲ್ಕರಿಂದ ಐದು ವರ್ಷದ ಚಿರತೆ ಸೆರೆಯಾಗಿದ್ದು ಇನ್ನೂ ಎರಡು ಚಿರತೆಗಳ ಓಡಾಡಿಕೊಂಡಿದ್ದು ರೈತರು ಆತಂಕದಿಂದ ಓಡಾಡುವ ಸ್ಥಿತಿ ಹಾಗೇಯೆ ಉಳಿದಿದದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ ನಂತರವೇ ಚಿರತೆಯ ಸ್ಥಳಾಂತರ ತಿಳಿಯಲಾಗುವುದು ಎಂದು ತಿಳಿದುಬಂದಿದದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top