ತೆಲಂಗಾಣ: ಟಿ ಬಿ ಜಯಚಂದ್ರ ರವರು ಸ್ಥಳೀಯ ಪ್ರತಿಬೆಗಳಿಗೆ ಗ್ರಾಮೀಣ ಮಟ್ಟದಿಂದಲೂ ಅವಕಾಶ ಕಲ್ಪಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ

ತೆಲಂಗಾಣ: ತೆಲಂಗಾಣ ರಾಜ್ಯದ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ರವರು ತೆಲಂಗಾಣ ರ‍್ಕಾರ ಜಾರಿಗೆ ತಂದಿರುವ,ಭಾರತ ದೇಶದ ಏಕೈಕ ಮೂಲ ಮಾದರಿ ಕಂಪನಿ ಟಿ-ವರ್ಕ್ಸ್ಗೆ ಅಲ್ಲಿನ ಮುಖ್ಯಸ್ಥರಾದ ಬುಲ್ಲನೇನಿ ಧನುಷ್ ಶ್ರೀನಿವಾಸ್ ರವರು ಮತ್ತು ತೆಲಂಗಾಣ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಮಲ್ಲು ರವಿ ರವರ ಕೋರಿಕೆ ಮೇರೆಗೆ ಭೇಟಿ ನೀಡಿ  ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಅವಿಷ್ಕಾರಗಳಿಗೆ ಸಂಬಂಧಪಟ್ಟಂತೆ ಅಲ್ಲಿನ ಸರ್ಕಾರ ಸ್ಥಳೀಯ ಪ್ರತಿಬೆಗಳಿಗೆ ಗ್ರಾಮೀಣ ಮಟ್ಟದಿಂದಲೂ ಅವಕಾಶ ಕಲ್ಪಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂರ‍್ಭದಲ್ಲಿ ಪ್ರತಿಕ್ರಿಯಿಸಿದ ಜಯಚಂದ್ರ ರವರು ಟಿ-ರ‍್ಕ್ ಕಂಪನಿಯ ಕರ‍್ಯ ಶ್ಲಾಘನೀಯವಾಗಿದ್ದು ಯುವ ಪೀಳಿಗೆ ತಮ್ಮ ಕೌಶಲ್ಯ ಮತ್ತು ತಾಂತ್ರಿಕತೆ ಬಗ್ಗೆ ಇರುವ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು ದೇಶದಲ್ಲೇ ಇದು ಮಾದರಿಯಾಗಿದೆ ಮತ್ತು ಉದ್ಯೋಗ ಸೃಷ್ಟಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top