ಚಿರಂಜೀವಿ ಅಭಿಮಾನಿಗಳಿಂದ ಸ್ವಚ್ಛತಾ ಅಭಿಯಾನ
ಬಳ್ಳಾರಿ : ಅಖಿಲ ಕರ್ನಾಟಕ ಚಿರಂಜೀವಿ ಯುವತ ಸಂಘದ ವತಿಯಿಂದ ಇಂದು ಬಳ್ಳಾರಿ ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಭಾರತ ಚಿರಂಜೀವಿ ಯುವತ ರಾಷ್ಟ್ರಧ್ಯಕ್ಷರಾದ ಸತ್ಯನಾರಾಯಣ ಮಹೇಶ್ನವರ ಆದೇಶದ ಮೇರೆಗೆ ಅಖಿಲ ಕರ್ನಾಟಕ ಚಿರಂಜೀವಿ ಯುವತ ಬಳ್ಳಾರಿ ಘಟಕದ ಅಧ್ಯಕ್ಷ ರಾಜು (ನಾಗರಾಜು) ರವರ ನಿರ್ದೇಶನದಂತೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು, ನಗರದ ಕೇಂದ್ರ ಗ್ರಂಥಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಆಚಾರ್ಯ ದೇವೋಭವ ಚಿತ್ರದ ಹೆಸರಿನಲ್ಲಿ ಪ್ರತೀ ವಾರ ಒಂದೊಂದು ಕಾರ್ಯಕ್ರಮಗಳನ್ನು …