ಭೈರಸಂದ್ರ ವಾರ್ಡ್ ನಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪ್ರತಿಮೆ ನಿರ್ಮಾಣದ ಕಟ್ಟಡ ನೆಲಸಮ ಮಾಡಿದ ಬಿಬಿಎಂಪಿ ಅಧಿಕಾರಿಗಳು
ಬೆಂಗಳೂರು : ಜಯನಗರದ ೪ ಬ್ಲಾಕ್ ನ ಭೈರಸಂದ್ರ ವಾರ್ಡ್ ನ ತಿಲಕ್ ನಗರದಲ್ಲಿ ಕ್ಷಿಪಣಿ ಪಿತಾಮಹಾ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ಸರ್ವಸಮ್ಮತವಾಗಿ ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ ಬಿಬಿಎಂಪಿ ಅಧಿಕಾರಿಗಳು ಕಟ್ಟಡವನ್ನು ಧ್ವಂಸಗೊಳಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಕುಮ್ಮಕ್ಕು ಮತ್ತು ರಾಜಕೀಯ ದ್ವೇಷದಿಂದ ನಮ್ಮ ರಾಷ್ಟ್ರ ನಿರ್ಮಾಪಕರಾದ ಅಬ್ಧುಲ್ ಕಲಾಂ ಅವರ ಪ್ರತಿಮೆ ನಾಪತ್ತೆಯಾಗಿದ್ದು, ಅವರಿಗಾಗಿ ಕೈಗೊಂಡಿದ್ದ ನಿರ್ಮಾಣ ಚಟುವಟಿಕೆಗೆ ಬಿಬಿಎಂಪಿ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.