ಬೆಂಗಳೂರು : ವೇದoದ್ ಯೋಗ ಮತ್ತು ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ನಿಂದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ನಟ, ನಿರ್ಮಾಪಕ, ಗಂಡಸಿ ಸದಾನಂದ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
![](https://kannadanadunews.in/wp-content/uploads/2024/01/WhatsApp-Image-2024-01-29-at-17.59.42_fd219b87-1024x681.jpg)
ಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಜು ಮತ್ತು ವೇದಶ್ರೀ, ಲಯನ್ ಲಕ್ಷ್ಮಿಪಥಯ್ಯ, ಡಾಕ್ಟರ್ ರಮೇಶ್ ಕೃಷ್ಣಮೂರ್ತಿ, ಸಮಾಜ ಸೇವಕಿ ಶುಭ ರಾಜಶೇಖರ್, ಬೆಳ್ಳಿ ಪ್ರಕಾಶ್, ಟೀನಾ ಮುನೇಂದ್ರ ಸೇರಿದಂತೆ ಅನೇಕ ಸಾಧಕರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟ ಶಂಕರ್ ಭಟ್, ಬೆಳದಿಂಗಳ ಆಶ್ರಯ ಟ್ರಸ್ಟ್ ಅಧ್ಯಕ್ಷ ವಿಜಯ್ ಸೂರ್ಯ, ನ್ಯಾಷನಲ್ ಕರಾಟೆ ಚಾಂಪಿಯನ್ ಶ್ರವಂತ್, ಸಮಾಜ ಸೇವಕರಾದ ಶರಣಪ್ಪ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
Facebook
Twitter
LinkedIn
Telegram
WhatsApp
Email
Print