ಕೊಪ್ಪಳ,ಜನವರಿ, 28 : ಕೆ ಪಿ ಪೂರ್ಣಚಂದ್ರ ತೇಜಸ್ವಿ “ಇಕೋ ಕ್ಲಬ್” ಆಶ್ರಯದಲ್ಲಿ “ಔಷಧ ಸಸ್ಯಗಳ ಪರಿಚಯ” ವನ್ನು ವಿಜ್ಞಾನ ಶಿಕ್ಷಕರಾದ ಶರಣಪ್ಪ ಪರಸಾಪುರ ಅವರು ವಿದ್ಯಾರ್ಥಿಗಳಿಗೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ “ಸಂವಾದ” ಕಾರ್ಯಕ್ರಮ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ, ಶಿಕ್ಷಕರುಗಳಾದ ಅರವಿಂದಕುಮಾರ ದೇಸಾಯಿ, ಸಿದ್ದನಗೌಡ ಪೋಲಿಸ್ ಪಾಟೀಲ್, ಬಸವರಾಜ ಪಿ, ಶಾಕೀರ್ ಬಾಬಾ ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್,ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ ಇದ್ದರು.
![](http://www.kannadanadunews.in/wp-content/uploads/2022/01/WhatsApp-Image-2022-01-28-at-5.12.51-PM-1024x768.jpeg)
ಅದೇ ರೀತಿ “ಜಾಗತಿಕ ತಾಪಮಾನ ಹೆಚ್ಚಳ” ಕುರಿತು ಪ್ರಬಂಧ ರಚನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಥಮ:- ಸುಮಾ ಮಸ್ಕಿ ಮಠ
ದ್ವಿತೀಯ:- ಯಲ್ಲಪ್ಪ ಕುಷ್ಟಗಿ
ತೃತೀಯ:- ಸುಶ್ಮಿತಾ ಭಜಂತ್ರಿ ..