ಆಸ್ತಿ ವಿಚಾರಕ್ಕೆ ಸೋದರಿಯ ಕೊಲೆ

ಬೆಂಗಳೂರು, ನ ೨೭: ಆಸ್ತಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆಸ್ವಂತ ತಮ್ಮನೇ ತನ್ನ ಅಕ್ಕನನ್ನು ಕೊಲೆ ಮಾಡಿಸಿರುವ ಘಟನೆಬೆಂಗಳೂರಿನಲ್ಲಿ ನಡೆದಿದೆ.
೭ ತಿಂಗಳ ಹಿಂದೆ ನಡೆದ ಭಯಾನಕ ಕೊಲೆಯ ರಹಸ್ಯದಹಿಂದಿನ ಅಸಲಿಯತ್ತನ್ನು ಪೊಲೀಸರು ಬಯಲು ಮಾಡಿದ್ದು,ಬೆಂಗಳೂರಲ್ಲಿ ನೆಲೆಸಿದ್ದ ಮಹಿಳೆ ಕೊಲೆ ಸ್ಟೋರಿ ೭ ತಿಂಗಳಬಳಿಕ ಬೆಳಕಿಗೆ ಬಂದಿದೆ. ೪೭ ವರ್ಷದ ಸೀತಾ ಕೊಲೆಯಾದದುರ್ದೈವಿಯಾಗಿದ್ದು, ಮಿಸ್ಸಿಂಗ್ ಕೇಸ್ ಹಿಂದೆ ಬಿದ್ದ ಪೊಲೀಸರುಕೊಲೆ ರಹಸ್ಯವನ್ನು ಕೊನೆಗೂ ಬಯಲು ಮಾಡಿದ್ದಾರೆ.ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿದ್ದ ಸೀತಾ, ಸೈನೆಡ್ನೀಡಿ ಮಹಿಳೆಯನ್ನು ನಾಲ್ವರು ಕಿರಾತಕರು ಹತ್ಯೆ ಮಾಡಿದ್ದರು.ಮೂಲತಃ ಮಂತ್ರಾಲಯದವರಾಗಿದ್ದ ಸೀತಾ ಇದೇ ಮಾರ್ಚ್ ೨೩ ರಂದು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಅಕ್ಕ ಕಾಣೆಯಾಗಿದ್ದಾಳೆ ಎಂದು ಸ್ವತಃ ತಮ್ಮ ವೆಂಕಟೇಶ್ ಆಚಾರ್ ದೂರು ನೀಡಿದ್ದ.


ಮಿಸ್ಸಿಂಗ್ ಕೇಸ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಸೀತಾಳ ಸುಳಿವೆಸಿಕ್ಕಿರಲಿಲ್ಲ. ಇತ್ತೀಚೆಗೆ ಕಾಲ್ ಡಿಟೈಲ್ಸ್ ಆದರಿಸಿ ಸತ್ಯ ಅನ್ನೊವ್ಯಕ್ತಿಯ ಬಂಧನ ಮಾಡಿದ್ದರು. ಆರೋಪಿ ಸತ್ಯನನ್ನು ಪೊಲೀಸರು ಸರಿಯಾಗಿ ವಿಚಾರಿಸಿಕೊಂಡಾಗ ಅಸಲಿ ವಿಚಾರ ಹೊರಬಿದ್ದಿದೆ.

Leave a Comment

Your email address will not be published. Required fields are marked *

Translate »
Scroll to Top