ಗುಡುಗು ಸಿಡಿಲಿಗೆ ತಾಯಿ ಮಗ ಸಾವು

ಮೊಳಕಾಲ್ಮುರು : ತಾಲ್ಲೂಕಿನ ಹಾನಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಗಳಹಟ್ಟಿಯಲ್ಲಿ ನಿನ್ನೇ ಸಾಯಂಕಾಲ ಗುಡುಗು ಸಿಡಿಲು ಬಡಿದ ಪರಿಣಾಮಾ ತಾಯಿ ಮಾರಕ್ಕ 47 ವರ್ಷ ಮತ್ತು ಮಗ ವೆಂಕಟೇಶ್ 17ವರ್ಷ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಇದನ್ನು ಅರಿತ ಮಾನ್ಯ ಸಾರಿಗೆ ಸಚಿವರು ಬಿ. ಶ್ರೀರಾಮುಲು ಸಂತಾಪ ವ್ಯಕ್ತ ಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಇವರು ಮಾನ್ಯ ಸಚಿವರು ಬಿ. ಶ್ರೀರಾಮುಲುರವರು ಸಿಡಿಲುನಿಂದ ಮೃತ ಪಟ್ಟ ಇವರಿಗೆ ಸಂತಾಪ ವ್ಯಕ್ತ ಪಡಿಸಿದರು ಹಾಗೂ ಸರ್ಕಾರದಿಂದ ಬರುವ 5ಲಕ್ಷ ಪರಿಹಾರ ಹಣವನ್ನು ಶೀಘ್ರದಲ್ಲಿ ಕೊಡಿಸುವುದಾಗಿ ಭರವಸೆ ನೀಡಿದರು. ಸಂದರ್ಭದಲ್ಲಿ ತಾಲ್ಲೂಕಿನ ಆರಕ್ಷ ನಿರೀಕ್ಷಿಕರು ಪಾಂಡುರಂಗಪ್ಪ ಆಸ್ಪತ್ರೆಯಲ್ಲಿ ಭಾಗವಹಿಸಿ ಸರ್ಕಾರ ವಿದಿವಿದಾನ ಪೂರೈಸಿ ಮೃತ ದೇಹಗಳನ್ನು ಅವರ ಕುಟುಂಬಕ್ಕೆ ನೀಡಿ ಕುಟುಂಬಕ್ಕೆ ಧೈರ್ಯ ತುಂಬವ ಮಾತಾಡಿ ಬಂದರು.


ಸಂದರ್ಭದಲ್ಲಿ ಮಾನ್ಯ ಶ್ರೀರಾಮುಲು ಆಪ್ತರು ಪಾಪೇಶ್, ಪ. ಪ. ಅಧ್ಯಕ್ಷರು ಪಿ. ಲಕ್ಷ್ಮಣ,ಬಿಜೆಪಿ ಘಟಕದ ಅಧ್ಯಕ್ಷರು ಡಾ. ಪಿ. ಎಂ. ಮಂಜುನಾಥ್, ಮಾಜಿ ಗ್ರಾಮ ಸದಸ್ಯರು ತುಮಕೂರ್ಲಹಳ್ಳಿ ಮಂಜುನಾಥ್,ಗ್ರಾಮ ಪ ಸದಸ್ಯರು ಭೈರಣ್ಣ, ಕಿರಣ್ ಗಾಯಕ್ ವಾಡ್, ಹೇಮಣ್ಣ,ತಳವಾರಹಳ್ಳಿ ಮೋಹನ್, ಮಾರುತಿ, ಹಾನಗಲ್ ಶ್ರೀನಿವಾಸ್,
ಒಬಣ್ಣ ಸುರೇಶ ಹಾಗೂ ಮೆಗಾಳಹಟ್ಟಿ ಗ್ರಾಮಸ್ಥರು ಸಂತಾಪ ಸೂಚಿಸಿದರು.

Leave a Comment

Your email address will not be published. Required fields are marked *

Translate »
Scroll to Top