‘ಕೈ’ಕೊಟ್ಟ ಚೆಂಬನ್ನು ಅಕ್ಷಯ ಪಾತ್ರೆಯಾಗಿಸಿ ಬಡವರಿಗೆ ಕೊಟ್ಟ ಮೋದಿ: ಹೆಚ್​ಡಿ ದೇವೇಗೌಡ

ಚಿಕ್ಕಬಳ್ಳಾಪುರ: ಸಂಪತ್ತು ಲೂಟಿ ಮಾಡಿ ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಖಾಲಿ ಚೊಂಬು ಕೊಟ್ರು. ಮೋದಿ ಅಧಿಕಾರಕ್ಕೆ ಬಂದು ಸಣ್ಣ ರ‍್ಗದವರನ್ನೇ ಮೇಲಕ್ಕೆ ಎತ್ತಿದ್ದಾರೆ. ಆ ಮೂಲಕ ಖಾಲಿಯಾಗಿದ್ದ ಚೊಂಬನ್ನೇ ಮೋದಿ ಅಕ್ಷಯ ಪಾತ್ರೆಯಾಗಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗರ‍್ಕಿ ಬಳಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಚೊಂಬನ್ನು ಯಾರು ಕೊಟ್ಟವರು. ದೇಶದಲ್ಲಿ ಯುಪಿಎ ರ‍್ಕಾರ ಇದ್ದಾಗ ದೇಶದ ಸಂಪತ್ತನ್ನು ಲೂಟಿ ಮಾಡಿದರು. ಯುಪಿಎ ರ‍್ಕಾರ ಲೂಟಿ ಮಾಡಿದ್ದಕ್ಕೆ ಚೊಂಬು ಖಾಲಿ ಆಗಿತ್ತು ಎಂದಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಈ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಚೊಂಬು ಜಾಹೀರಾತು ಕೊಟ್ಟ ಸಿಎಂ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ. ಈ ರಾಜ್ಯದಲ್ಲಿ ೨೮ ಸ್ಥಾನಗಳಲ್ಲೂ ಎನ್ಡಿಎ ಅಭ್ರ‍್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಹೇಳಿದ್ದಾರೆ.

ಕೋಲಾರದಲ್ಲಿ ರಾಹುಲ್ ಭಾಷಣ ಬಗ್ಗೆ ವ್ಯಾಖ್ಯಾನ ಮಾಡಲು ಹೋಗಲ್ಲ. ನಿನ್ನೆ ಮಲ್ಲೇಶ್ಬಾಬುಗಾಗಿ ಎರಡು ಸಭೆಗಳನ್ನು ಮಾಡಿದ್ದೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ಗೆ ಮತ ನೀಡಿ. ದೇಶದಲ್ಲಿ ೪೦೦ ಸ್ಥಾನ ಗೆಲ್ಲುವ ಗುರಿ ಮುಟ್ಟಲು ಇಲ್ಲಿ ೨೮ ಸ್ಥಾನ ಗೆಲ್ಲಬೇಕು. ರಾಜ್ಯದಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಾರಂತೆ. ಈಗ ದೇಶದಲ್ಲಿ ೨೫ ಗ್ಯಾರಂಟಿ ಕೊಡ್ತಾರಂತೆ ಎಂದು ವಾಗ್ದಾಳಿ ಮಾಡಿದರು.

 

ದೇಶದಲ್ಲಿ ವಿಪಕ್ಷ ಸ್ಥಾನ ಪಡೆಯುವ ಯೋಗ್ಯತೆಯೂ ಕಾಂಗ್ರೆಸ್ಗೆ ಇಲ್ಲ. ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಪಿಎಂ ಮೋದಿ ಪ್ರಸ್ತಾಪ ಮಾಡಿದ್ದರು. ರಾಜ್ಯದಲ್ಲಿ ೨೮ ಅಭ್ರ‍್ಥಿಗಳನ್ನು ಗೆಲ್ಲಿಸಿ ನವದೆಹಲಿಗೆ ಕಳುಹಿಸೋಣ. ಬಳಿಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಡಿ ಎಂದು ಕೇಳೋಣ ಎಂದಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top