60 ಎಕರೆ ಸರ್ಕಾರಿ ಜಾಗ ರಕ್ಷಿಸುವಂತೆ ಶಾಸಕ ನಾರಾ ಭರತ್ ರೆಡ್ಡಿ ಆದೇಶ

ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರ ವ್ಯಾಪ್ತಿಯ 17ನೇ ವಾರ್ಡ್ ನ ಸರ್ಕಾರಿ ಬಿಟ್ 60 ಎಕರೆ ಜಮೀನನ್ನು ಸ್ವಚ್ಛಗೊಳಿಸಿ, ಫೆನ್ಸಿಂಗ್ ಹಾಕಿ ರಕ್ಷಣೆ ಮಾಡುವಂತೆ ಶಾಸಕ ನಾರಾ ಭರತ್ ರೆಡ್ಡಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಆದೇಶ ನೀಡಿದರು.

 

ಭಾನುವಾರ ಮಧ್ಯಾಹ್ನ 17ನೇ ವಾರ್ಡಿನ ಸರ್ಕಾರಿ ಬಿಟ್ 60 ಎಕರೆ ಜಾಗಕ್ಕೆ ಭೇಟಿ ನೀಡಿದ ಶಾಸಕ ಭರತ್ ರೆಡ್ಡಿ ಅವರು ಸ್ಥಳ ಪರಿಶೀಲನೆ ಮಾಡಿದರು. 

ನಗರದ ಕೆಲವು ಪ್ರಭಾವಿ ವ್ಯಕ್ತಿಗಳು ಸದರಿ ಜಾಗವನ್ನು ಒತ್ತುವರಿ ಮಾಡಿ, ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ನೀಡಲು ಮುಂದಾಗಿರುವ ವಿಷಯ ತಿಳಿದ ಶಾಸಕರು, ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ಕರೆಸಿಕೊಂಡು ಕಟ್ಟುನಿಟ್ಟಿನ ಆದೇಶ ನೀಡಿದರು.

 

          ಜಾಗವನ್ನು ಜೆಸಿಬಿಗಳಿಂದ ಸ್ವಚ್ಛ ಮಾಡಿಸಿ, ಫೆನ್ಸಿಂಗ್ ಹಾಕಿ, ಸಸಿಗಳನ್ನು ನೆಟ್ಟು, ಸಾಮಾಜಿಕ ಅರಣ್ಯ ಮಾಡುವಂತೆ ಸೂಚನೆ ನೀಡಿದರು.

ನಗರದ ಯಾವುದೇ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಒಳಗಾಗದೇ ಸರ್ಕಾರಿ ಜಮೀನಿನ ರಕ್ಷಣೆಗೆ ಬದ್ಧರಾಗಬೇಕೆಂದು ಆದೇಶಿಸಿದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top