ಗ್ರಾ.ಪಂ.ಉಪಚುನಾವಣೆಯಲ್ಲಿ ಮಹೇಶ್ ಗೆಲವು

ಮರಿಯಮ್ಮನಹಳ್ಳಿ,ಡಿ,,30 : ಪಟ್ಟಣ ಸಮೀಪದ ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಂಕಟಾಪುರದಲ್ಲಿ ನಡೆದ  ಉಪ ಚುನಾವಣೆಯಲ್ಲಿ ವೆಂಕಟಾಪುರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಜಯಗಳಿಸಿದರು. ಇದಕ್ಕೆ ಕಾರಣರಾದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಂತರ ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ. ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕ, ಮಾಜಿ ಗ್ರಾಮ ಪಂಚಯತಿ ಅಧ್ಯಕ್ಷ ಸಿಎ.ಗಾಳೆಪ್ಪ, ಮಂಜುನಾಥ, ಬಸವರಾಜ, ಡಿ.ಎಂ.ಕೆಂಚಪ್ಪ, ಕುಮಾರ, ದ್ಯಾಮಣ್ಣ ಡಿ.ಜಂಬಣ್ಣ.ಮಾರುತಿ.ಡಿ.ಎಂ.ರಾಮಪ್ಪ ವಿಕ್ಟರ್, ಕೊಳ್ಳಪ್ಪ ಪಿ.ರಾಮಪ್ಪ, ಕರಡಿ ಹುಲುಗಪ್ಪ, ಹೆಚ್ ಎಂ.ಹೆಚ್ ಹುಲುಗಪ್ಪ, ದುರುಗಪ್ಪ, ಜಿ.ಕುಮಾರ್ ಸ್ವಾಮಿ, ತಳವಾರ ಹನುಮಂತಪ್ಪ, ವೆಂಕಟೇಶ ಕಾರ್ತೀಕಿ, ಬಿ.ಹೆಚ್ ಹುಲುಗಪ್ಪ, ಬಸವರಾಜ, ಬಿ.ಸಣ್ಯಪ್ಪರ ಹುಲುಗಪ್ಪ, ಪೂಜಾರಿ ದುರುಗಪ್ಪ, .ಪೂಜಾರಿ ಅಂಜಿನಪ್ಪ, ಲಕ್ಷ್ಮಣ, ರಾಮ.ಜಿ, ಗಂಗಪ್ಪರ ಮಹೇಶ್ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top