ಸೇಂಟ್ ಅಂತೋನಿ ಚರ್ಚ್ನಲ್ಲಿ ವನಮಹೋತ್ಸವ - 2023 ಆಚರಣೆ
ಬಳ್ಳಾರಿ: ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸಿಮೀತವಾಗದೆ ನಿತ್ಯವೂ ವನಮಹೋತ್ಸವ ಎನ್ನುವಂತೆ ದಿನಾ ಪರಿಸರ ಕುರಿತು ಜಾಗೃತಿ ವಹಿಸುವುದು ಅತಿ ಅವಶ್ಯವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
![](https://kannadanadunews.in/wp-content/uploads/2023/07/8_t93bvDL3ulrZqhOZFI7f_kgJoq-c3zGuG0RePwDzQ_plaintext_638251034747883197-1024x809.jpg)
ನಗರದ ಸೇಂಟ್ ಅಂತೋನಿ ಚರ್ಚ್ನಲ್ಲಿ ಭಾನುವಾರ ಕ್ಯಾಥೊಲಿಕ್ ಧರ್ಮಪ್ರಾಂತ್ಯ ಬಳ್ಳಾರಿ ವತಿಯಿಂದ ವನಮಹೋತ್ಸವ -2023 ಅಂಗವಾಗಿ 2 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೂರಾರು ಗಿಡಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ನಿತ್ಯ ವಾಹನಗಳು ಹೆಚ್ಚಾಗುತ್ತಿವೆ. ಗಿಡ ಮರಗಳು ನಾಶವಾಗುತ್ತಿವೆ. ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ, ಉಷ್ಣಾಂಶ ಹೆಚ್ಚಾಗುತ್ತಿದೆ. ಮಳೆ-ಬೆಳೆ ಕಡಿಮೆಯಾಗುತ್ತಿವೆ. ಕಾರಣ ಇದರ ಬಗ್ಗೆ ಸಮತೋಲನ ಕಾಪಾಡಲು ಯುವಕರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದು ಹೇಳಿದರು.
![](https://kannadanadunews.in/wp-content/uploads/2023/07/FpdmiTVdrMUkCLYwPSIjP_lpow7eZFZYtbqmGaHCtzw_plaintext_638251034744654616-1024x683.jpg)
ಈ ಕಾರ್ಯಕ್ರಮದಲ್ಲಿ ಕ್ಯಾಥೊಲಿಕ್ ಧರ್ಮಪ್ರಾಂತ್ಯ ಬಳ್ಳಾರಿ ಅಧ್ಯಕ್ಷ ಬಿಷಪ್ ಹೆನ್ರಿ ಡಿಸೋಜಾ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಡಿ. ತ್ರಿವೇಣಿ, ಉಪ ಮೇಯರ್ ಬಿ. ಜಾನಕಮ್ಮ, ಸದಸ್ಯ ನಿಯಾಜ್ ಅಹ್ಮದ್, ಕಾರ್ಯದರ್ಶಿ ಫಾ.ಪಿವಿಆಂಟನಿ, ಚರ್ಚಿನ ಮುಖ್ಯ ಗುರು ಫಾ.ವಿನ್ಸೆಂಟ್ ರೋಡ್ರಿಗಸ್, ಉಪಾಧ್ಯಕ್ಷ ಜೆರಾಲ್ಡ್, ಕಾಂಗ್ರೆಸ್ ಪಕ್ಷದ ಮುಖಂಡ ಸೋಮು, ನಾಗಲಕೆರೆ ಗೋವಿಂದ, ಮುದಿ ಮಲ್ಲಯ್ಯ ಸೇರಿದಂತೆ ಹಲವು ಪ್ರಮುಖ ಮುಖಂಡರು ಹಾಜರಿದ್ದರು.