ಕುಷ್ಟಗಿ:- ಕುಷ್ಟಗಿ ಪಟ್ಟಣದ ವಾರ್ಡ ೯ ರಲ್ಲಿ ಕಾರ್ತಿಕ ಮಾಸದ ನಿಮಿತ್ಯ ಶ್ರೀ ಹೊನ್ನಕೇರಿ ಮಲ್ಲಯ್ಯ ದೇವಸ್ಥಾನದಲ್ಲಿ ಹಾಗೂ ವಾರ್ಡ ೧೦ ಗೊಲ್ಲರ ಓಣಿಯ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಅತ್ಯಂತ ಅದ್ದೂರಿಯಾಗಿ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಹೊನ್ನಕೇರಿ ಮಲ್ಲಯ್ಯ ದೇವಸ್ಥಾನದಲ್ಲಿ ಮತ್ತು ಗೊಲ್ಲರ ಓಣಿಯ ಮಾರುತೇಶ್ವರ ದೇವರಿಗೆ ವಿಶೇಷ ಪೂಜೆ ಕುಂಕುಮಾರ್ಚನೆ ಬಿಲ್ವಾರ್ಚನೆ ಮಹಾನ ತೀರ್ಥಪ್ರಸಾದ ಸೇರಿದಂತೆ ಅನೇಕ ಪೂಜಾಕೈಂಕರ್ಯಗಳು ನಡೆದವು ನಂತರ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು ಎರಡು ದೇವಸ್ಥಾನದ ಭಕ್ತರು ದೇವರಿಗೆ ಕಾಯಿ ಕರ್ಪೂರವನ್ನು ಅರ್ಪಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಹೊನ್ಮಕೇರಿ ದೇವಸ್ಥಾನದ ಸಮಿತಿಗಳಾದ ಸಂಗಪ್ಪ ಪಂಚಮ್, ಶರಣಪ್ಪ ಚೂರಿ, ಕೊಳ್ಳಪ್ಪ ಬೂದ್, ಹಾಗೂ ಗೊಲ್ಲರ ಓಣಿಯ ದೇವಸ್ಥಾನ ಸಮಿತಿಗಳಾದ ಬೀಮನಗೌಡ ಕಟ್ಟಿಗೌಡ್ರ, ಶರಣಪ್ಪ ಕತ್ತಿ, ನಾಗರಾಜ ಕಟ್ಟಿಗೌಡ್ರ, ದುರಗಪ್ಪ ಎಮ್ಮಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.