ನ್ಯಾಯ ಹಬ್ಬ: ಪ್ರತಿಯೊಬ್ಬರು ನ್ಯಾಯ ಪಡೆಯಲು ಮೊದಲು ಕಾನೂನಿನ ಬಗ್ಗೆ ಅರಿವು ಅಗತ್ಯ – ನಿವೃತ್ತ ನ್ಯಾಯಮೂರ್ತಿ ಬಿ.ಎನ್.‌ ಕೃಷ್ಣ

ಬೆಂಗಳೂರು : ಕನಕಪುರ ರಸ್ತೆಯ ಶಂಕರ ಫೌಂಡೇಶನ್‌ನಲ್ಲಿ ನ್ಯಾಯ ಹಬ್ಬ ಯಶಸ್ವಿಯಾಗಿ  ನಡೆಯಿತು. ಕಾನೂನು ಮಾಹಿತಿಯನ್ನು ಸರಳೀಕರಿಸಲು ಮತ್ತು ಎಲ್ಲರಿಗೂ ನ್ಯಾಯದ ಪ್ರವೇಶವನ್ನು ಖಾತ್ರಿಪಡಿಸಲು ಬದ್ಧವಾಗಿರುವ ಸ್ವಯಂ ಸೇವಾ ಸಂಸ್ಥೆ ‘ನ್ಯಾಯ’, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ  ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿತ್ತು. 

 

2 ಕೋಟಿಗೂ ಹೆಚ್ಚು ಬಳಕೆದಾರರ ವ್ಯಾಪ್ತಿಯೊಂದಿಗೆ, ‘ನ್ಯಾಯ’ ಬಹು ಭಾಷೆಗಳಲ್ಲಿ ಪಠ್ಯ, ವೀಡಿಯೊ ಮತ್ತು ಆಡಿಯೊ ಸ್ವರೂಪಗಳಲ್ಲಿ 2500 ವಿಷಯಗಳ ಮೂಲಕ ಕಾನೂನನ್ನು ಸರಳಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮ್ಮ ಪ್ರಯತ್ನಗಳು ತಳಮಟ್ಟದಲ್ಲಿ ನ್ಯಾಯವನ್ನು ಎತ್ತಿ ಹಿಡಿಯಲು 640 ಕಾನೂನು ಸ್ವಯಂಸೇವಕರಿಗೆ ಅಧಿಕಾರ ನೀಡಿದೆ.

ನ್ಯಾಯ ಹಬ್ಬ ರಾಜ್ಯದ ಶ್ರೀಮಂತ ಸಂಸ್ಕೃತಿ ಉಳಿಸಲು ಪ್ರಭಾವಶಾಲಿ ಚರ್ಚೆಗಳು, ಕಾರ್ಯಾಗಾರಗಳು ಮತ್ತು ಕಾನೂನು ಮತ್ತು ನ್ಯಾಯದ ಪ್ರವೇಶದ ಬಗ್ಗೆ ತನ್ನ ಚಟುವಟಿಕೆಯನ್ನು ಮುನ್ನಡೆಸುತ್ತಿದೆ. ಸಂವಿಧಾನ ಫೆಲೋಶಿಪ್  ಪೂರ್ಣಗೊಳಿಸಿದವರು ಸಮಾರಂಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 

ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಮಾತನಾಡಿ, “ನ್ಯಾಯವು ಪ್ರತಿಯೊಬ್ಬ ವ್ಯಕ್ತಿಗೆ ಅವರ ಅಗತ್ಯತೆಗಳು ಮತ್ತು ಸಂದರ್ಭಗಳ ಆಧಾರದ ಮೇಲೆ ವಿಭಿನ್ನ ವಿಷಯಗಳನ್ನು ಅರ್ಥೈಸುತ್ತದೆ. ಆದರೆ ಪ್ರತಿಯೊಬ್ಬರು ನ್ಯಾಯವನ್ನು ಪಡೆಯುವಂತೆ ಆಗಲು ಮೊದಲು ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು.” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ ಮಾತನಾಡಿ, “ನ್ಯಾಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಸಾಕಷ್ಟು ವರ್ಷಗಳಿಂದ ಮಾಡುತ್ತಿದ್ದರೂ, ನ್ಯಾಯವನ್ನು ಹಬ್ಬದಂತೆ ಸಂಭ್ರಮಿಸುವುದು ನನ್ನ ಕನಸಾಗಿತ್ತು, ಅದನ್ನು ಈಗ ನ್ಯಾಯ ಸಂಸ್ಥೆ ಮಾಡುತ್ತಿದೆ.” ಎಂದು ಹರ್ಷ ವ್ಯಕ್ತಪಡಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top