ಶಿವಮೊಗ್ಗ: ನಗರದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ಗಳನ್ನು ಅಳವಡಿಸಿರುವ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 39 ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ 39 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
![](https://kannadanadunews.in/wp-content/uploads/2023/06/traffic.jpg)
ಸಂಚಾರಿ ವೃತ್ತ ನಿರೀಕ್ಷಕರಾದ ಸಂತೋಷ್ ಕುಮಾರ್ ಇತ್ತೀಚೆಗೆ ಅಧಿಕಾರ ಸ್ಚೀಕರಿಸಿದ ನಂತರ ನಗರ ಸಂಚಾರಿ ಸುವ್ಯವಸ್ಥೆಗೆ ವ್ಯಾಪಕ ಕ್ರಮ ಜರುಗಿಸುತ್ತಿದ್ದಾರೆ. ನಗರದಲ್ಲಿ ವಾಹನ ಸಂಚಾರಿ ದಟ್ಟಣೆ ಹೆಚ್ಚುತ್ತಿರುವುದರಿಂದ ಸಂಚಾರಿ ಕಾನೂನು ಜಾರಿ ಬಗ್ಗೆ ನಾಗರಿಕರಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಸಂಚಾರಿ ಪೋಲೀಸ್ ವೃತ್ತದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Facebook
Twitter
LinkedIn
WhatsApp