ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ : ಮೆರವಣಿಗೆಯಲ್ಲಿ ಭಾಗಿ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾದ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುವ ಮೊದಲು ಒಂದು ಸೆಟ್ ನ ನಾಮಪತ್ರ ಸಲ್ಲಿಸಿದ್ದಾರೆ.

ನಂತರ ಮಾಧ್ಯಮಗಳಿಗೆ ಮಾತನಾಡಿದ ಅಭ್ಯರ್ಥಿ ಗೀತ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಗ್ಯಾರೆಂಟಿಯಿಂದಾಗಿ ಜನ ಕಾಂಗ್ರೆಸ್ ಗೆ ಮತಹಾಕಲಿದ್ದಾರೆ. ಹೋದಕಡೆಯಲ್ಲ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದರು.

 

ಡಿಸಿಎಂ ಡಿಕೆ ಶಿವಕುಮಾರ್ ಶಿವಮೊಗ್ಗಕ್ಕೆ ಬಂದ ಮೇಲೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ನಟ ಡಾ.ಶಿವರಾಜ್ ಕುಮಾರ್ ಮಾತಾಡಿ, ಈ ಬಾರಿ ಗೆಲುವಿನ ವಿಶ್ವಾಸವಿದೆ. ಅಭ್ಯರ್ಥಿಯನ್ನ ಸಾಫ್ಟ್ ಆಗಿದ್ದಾರೆ. ಜನರನ್ನ ಹೇಗೆ ಸಂಪರ್ಕಿಸುತ್ತಿದ್ದೀರ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ಕೆಲಸ ಸಾಫ್ಟ್ ಆಗಿದ್ದರೆನೆ‌ ಜನರನ್ನ ಮುಟ್ಟಲು ಸಾಧ್ಯ ಎಂದರು.

 

ಪತ್ನಿ ಗೀತರ ಪರ ಪ್ರಚಾರಕ್ಕೆ ಹೋದ ಕಡೆ ಎಲ್ಲಾ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ನಂತರ 12-40 ರಿಂದ ರಾಮಣ್ಣ‌ಶ್ರೇಷ್ಠಿ ಪಾರ್ಕ್ ನಿಂದ  ಗೀತ ಶಿವರಾಜ್ ಕುಮಾರ್, ನಟ ಡಾ.ಶಿವರಾಜ್ ಕುಮಾರ್ ಶಾಸಕ ಗೋಅಲ್ ಕೃಷ್ಣ ಬೇಳೂರು, ಸಚಿವ ಮಧುಬಂಗಾರಪ್ಪನವರ ಜೊತೆ ಮೆರವಣಿಗೆ ಹೊರಟಿರು. ಈ ವೇಳೆ ಮಧು ಬಂಗಾರಪ್ಪ  ಗೀತಕ್ಕರನ್ನ‌ಮಡಿಲಿಗೆ ಹಾಕಿದ್ದೇವೆ ಗೆಲ್ಲಿಸುವ ಜವಬ್ದಾರಿ ನಿಮ್ಮದು ಎಂದು ಮನವಿ ಮಾಡಿಕೊಂಡರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ಸಜ್ಜಾಗಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top