ಬಳ್ಳಾರಿ : ಬಳ್ಳಾರಿ ನಗರ ಉಪ ವಿಭಾಗ ಡಿವೈಎಸ್ಪಿಯಾಗಿ ಚಂದ್ರಕಾಂತ್ ನಂದರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಚಂದ್ರಕಾಂತ್ ನಂದರೆಡ್ಡಿ ಅವರು ಈ ಹಿಂದೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದರು. ರಾಜ್ಯದ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ನಂದರೆಡ್ಡಿ ಅವರು ಇಲಾಖೆಯಲ್ಲಿ ಉತ್ತಮ ಸೇವೆಗೆ ಹೆಸರಾದವರು.



ರಾಜ್ಯದ ಒಟ್ಟು 44 ಜನ ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಐಪಿಎಸ್ ಅಧಿಕಾರಿ ಸೌಮೇಂದು ಚಟರ್ಜಿ ಆದೇಶ ಹೊರಡಿಸಿದ್ದಾರೆ.
Facebook
Twitter
LinkedIn
WhatsApp
Email
Print
Telegram