ಬಳ್ಳಾರಿ : ಬಳ್ಳಾರಿ ನಗರ ಉಪ ವಿಭಾಗ ಡಿವೈಎಸ್ಪಿಯಾಗಿ ಚಂದ್ರಕಾಂತ್ ನಂದರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಚಂದ್ರಕಾಂತ್ ನಂದರೆಡ್ಡಿ ಅವರು ಈ ಹಿಂದೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದರು. ರಾಜ್ಯದ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ನಂದರೆಡ್ಡಿ ಅವರು ಇಲಾಖೆಯಲ್ಲಿ ಉತ್ತಮ ಸೇವೆಗೆ ಹೆಸರಾದವರು.
![](https://kannadanadunews.in/wp-content/uploads/2023/11/chandrakanth-Nandareddy-DYSP.jpg)
![](https://kannadanadunews.in/wp-content/uploads/2023/11/02-1024x576.jpg)
![](https://kannadanadunews.in/wp-content/uploads/2023/11/01-724x1024.jpg)
ರಾಜ್ಯದ ಒಟ್ಟು 44 ಜನ ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಐಪಿಎಸ್ ಅಧಿಕಾರಿ ಸೌಮೇಂದು ಚಟರ್ಜಿ ಆದೇಶ ಹೊರಡಿಸಿದ್ದಾರೆ.
Facebook
Twitter
LinkedIn
WhatsApp
Email
Print
Telegram