ಸಮಾಜಸೇವೆಯ ಮೂಲಕ ಪುನೀತ್ ಗೆ ಗೌರವ ಸಮರ್ಪಣೆ
ದೇವನಹಳ್ಳಿ:ತಾನು ಬದುಕಿದ್ದಾಗ ಪುನೀತ್ ಸಮಾಜ ಸೇವೆಯ ಮೂಲಕ ಆತ್ಮ ತೃಪ್ತಿ ಹೊಂದುತ್ತಿದ್ದು, ಅವರ ಮರಣದ ನಂತರವು ಅವರ ಸವಿ ನೆನಪಿನಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುವ ಮೂಲಕ ಪುನೀತ್ ಅವರ ಆತ್ಮ ಸದಾ ಸಂತೃಪ್ತ ವಾಗಿರಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವ ಗಣೇಶ ವೃತ್ತದಲ್ಲಿ ವಿಜಯಪುರ ಹುಡುಗರು ಹಾಗೂ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆಯ …