ಬೆಂಗಳೂರು ಗ್ರಾಮಾಂತರ

ಜನಾಂಗದ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ : ಜಯರಾಜ್

ದೇವನಹಳ್ಳಿ: ವಿದ್ಯಾಭ್ಯಾಸಕ್ಕೆ ಜಾತಿ ಬೇಧದ ಹಂಗಿಲ್ಲ. ವಿದ್ಯೆ ಯಾರ ಸ್ವತ್ತೂ ಅಲ್ಲ. ನಾವು ಪಡೆದ ಶಿಕ್ಷಣ ನಮ್ಮ‌ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದು ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ರಾಜ್ಯಾಧ್ಯಕ್ಷ ಜಯರಾಜ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಯುವ ಪ್ರತಿಭೆ ಧನುಷ್ ಕುಮಾರ್ ರವರು ಉನ್ನತ ವಿದ್ಯಾಭ್ಯಾಸಕ್ಕಾಗಿ (ಯು.ಪಿ.ಎಸ್.ಸಿ) ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ರಾಜ್ಯಾಧ್ಯಕ್ಷ ಜಯರಾಜ್ ರವರು ಆರ್ಥಿಕ ಸಹಾಯವನ್ನು ಶಿವನಾಪುರದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪ್ರಣವಾನಂದ ಮಹಾಸ್ವಾಮಿಗಳ ಮೂಲಕ ನೀಡಿ. ಮಾತನಾಡಿ, …

ಜನಾಂಗದ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ : ಜಯರಾಜ್ Read More »

ಕೆರೆಗೆ ಬಾಗಿನ ಅರ್ಪಿಸಿದ ಶಾಂತಕುಮಾರ್

ದೇವನಹಳ್ಳಿ: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ದೇವನಹಳ್ಳಿ ತಾಲ್ಲೂಕು ತೂಬಗೆರೆ ಹೋಬಳಿಯ ಮೆಳೇಕೋಟೆ ಕೆರೆ ತುಂಬಿದ್ದು ಗ್ರಾಮಸ್ಥರದಲ್ಲಿ ಸಂತಸ ಮೂಡಿಸಿದೆ ನವರಾತ್ರಿ ಹಬ್ಬದ ಬೆನ್ನಲ್ಲೆ ಸಾಂಪ್ರದಾಯಿಕ ಶ್ರದ್ಧೆಯಿಂದ ಬಾಗಿನದ ಮೊರವನ್ನು ಗಂಗೆಯ ಒಡಲಿಗೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಸಮರ್ಪಿಸಿದರು. ನಂತರ ಮಾತನಾಡಿ ಶುದ್ಧವಾದ ನೀರು ಮಾತ್ರ ಕೆರೆಯ ಒಡಲನ್ನು ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದು ಉಪಯುಕ್ತವಾದ ಕ್ರಮವಾಗಿದೆ ಸರ್ಕಾರ ಕೆರೆಗಳ ಹೂಳು ತೆಗೆದು ನಾಲೆಗಳ ದುರಸ್ತಿ ಮಾಡಲು ಮೊದಲ …

ಕೆರೆಗೆ ಬಾಗಿನ ಅರ್ಪಿಸಿದ ಶಾಂತಕುಮಾರ್ Read More »

ದೇಶದ ನಗರ ಪ್ರದೇಶಗಳನ್ನು ಕಸಮುಕ್ತ ಗೊಳಿಸೋಣ -ರಾಜೇಶ್ವರಿಎಸ್.ಭಾಸ್ಕರ್

ದೇವನಹಳ್ಳಿ: ನಮ್ಮ ನಗರ ಸ್ವಚ್ಛವಾದರೆ ದೇಶ ತನ್ನಂತಾನೇ ಸ್ವಚ್ಛವಾಗುತ್ತದೆ ಎಂದು ವಿಜಯಪುರ ಪಟ್ಟಣ ಪುರಸಭೆಯ ಅಧ್ಯಕ್ಷೆ ರಾಜೇಶ್ವರಿಎಸ್.ಭಾಸ್ಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರೂಬಿ ಪ್ರೌಢಶಾಲೆಯ ಆವರಣದಲ್ಲಿ ಭಾರತ ಸರ್ಕಾರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ,ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ,ಪುರಸಭೆ ವಿಜಯಪುರ,ರೂಬಿ ಆಂಗ್ಲ ಪ್ರೌಢಶಾಲೆ ವಿಜಯಪುರ, ಇನ್ಸ್ ಪೈರ್ ಇನ್ಸ್ ಸ್ಟಿಟೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ಕಾ ಲೇಜು ವಿಜಯಪುರ, ಸ್ವಾಮಿ ವಿವೇಕಾನಂದ ಐಟಿಐ ಕಾಲೇಜು ವಿಜಯಪುರ ಹಾಗೂ ಸರ್ವಿಸ್ ಸಿವಿಲ್ …

ದೇಶದ ನಗರ ಪ್ರದೇಶಗಳನ್ನು ಕಸಮುಕ್ತ ಗೊಳಿಸೋಣ -ರಾಜೇಶ್ವರಿಎಸ್.ಭಾಸ್ಕರ್ Read More »

ಎಸ್.ಪಿ.ಬಿ.ರವರ ಗಾಯನ ಎಂದಿಗೂ ಉಲ್ಲಾಸದಾಯಕ: ಶಾಂತಕುಮಾರ್

ದೇವನಹಳ್ಳಿ: ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಎಸ್.ಪಿ.ಬಿ. ಮಾತ್ರ, ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಶಾಂತಕುಮಾರ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಸುವರ್ಣ ಕರ್ನಾಟಕ ಆರ್ಕೆಸ್ಟ್ರಾ …

ಎಸ್.ಪಿ.ಬಿ.ರವರ ಗಾಯನ ಎಂದಿಗೂ ಉಲ್ಲಾಸದಾಯಕ: ಶಾಂತಕುಮಾರ್ Read More »

ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ

ದೇವನಹಳ್ಳಿ: ನವರಾತ್ರಿ ವಿಶೇಷವಾಗಿ ದೇವನಹಳ್ಳಿ ಪಟ್ಟಣದ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಿ ದರ್ಶನ ಪಡೆದು ರಾಜ್ಯದ ಜನತೆಗೆ ಒಳಿತಾಗಲಿ ಪ್ರಪಂಚವನ್ನು ಆವರಿಸಿರುವ ಮಹಾಮಾರಿ ಕೊರೋನಾ ತೊಲಗಿ ಜನತೆ ಸುಭಿಕ್ಷವಾಗಿರಲಿ ಕಳೆದ ವರ್ಷ ಜನತೆ ಸಹಕರಿಸಿದಂತೆ ಈ ಬಾರಿ ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಸಲಹೆ ನೀಡಿದರು. ದೇವನಹಳ್ಳಿ ಪಟ್ಟಣದ ಪಾರ್ಕ್ ರಸ್ತೆಯಲ್ಲಿನ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಶರನ್ನವರಾತ್ರಿ ಪ್ರಯುಕ್ತ ಐದನೇ ದಿನವಾದ ಇಂದು ಹೂವಿನ ಅಲಂಕಾರದೊಂದಿಗಿನ ಅಮ್ಮನವರ ದರ್ಶನ ಪಡೆದು ನಂತರ …

ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ Read More »

ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿ: ಸಚಿವ ಎನ್.ನಾಗರಾಜು

ದೇವನಹಳ್ಳಿ: ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸರ್ಕಾರದೊಂದಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕೆಂದು ಪೌರಾಡಳಿ ಮತ್ತು ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎನ್.ನಾಗರಾಜು(ಎಂ.ಟಿ.ಬಿ) ಅವರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪಿ.ಎಂ.ಕೇರ್ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಪಿ.ಎಸ್.ಎ(ಆಕ್ಸಿಜನ್) ಘಟಕ …

ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿ: ಸಚಿವ ಎನ್.ನಾಗರಾಜು Read More »

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು

ದೇವನಹಳ್ಳಿ: ಉಳ್ಳವರು ಬಡವರಿಗೆ ಆಸರೆ ಆಗಬೇಕು ನಾವು ಇಂದಿನಿಂದಲೇ ಸೇವಾಕಾರ್ಯದಲ್ಲಿ ತೊಡಗೋಣ. ನಾವು ಮೂರು ಜನರಿಗೆ ಆಸರೆ ಆದರೆ ಅವರು ಮುಂದಕ್ಕೆ ಇನ್ನೂ ಮೂರು ಜನರಿಗೆ ಆಸರೆ ಆಗುತ್ತಾರೆ. ಸಂಘವನ್ನು ಒಂದು ಉತ್ತಮ ಧ್ಯೇಯ ದೊಂದಿಗೆ ಹುಟ್ಟು ಹಾಕಿದ ದಿ. ರಾಜಗೋಪಾಲ್ ರವರಿಗೆ ಹಾಗೂ ಸಂಘಕ್ಕೆ ಇದರಿಂದ ಒಳ್ಳೆಯ ಹೆಸರು ಬರುತ್ತದೆ ಎಂದು ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ.ಮೋಹನ್ ಬಾಬು ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್ …

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು Read More »

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ

ದೇವನಹಳ್ಳಿ: ಉತ್ತರಪ್ರದೇಶದಲ್ಲಿ ರೈತರ ಸಾವು , ಹಾಗು ಅವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ಮಾಡುತ್ತಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿ ಜಿಲ್ಲಾ ಹಾಗೂ ಟೌನ್ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಂತರ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು …

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ Read More »

ಹಿರಿಯ ನಾಗರಿಕರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ ಇರಲಿ: ಜಿಲ್ಲಾಧಿಕಾರಿ ಶ್ರೀನಿವಾಸ್

ದೇವನಹಳ್ಳಿ: ಕೆಲವೊಂದು ಪರಿಸ್ಥಿತಿಗಳಲ್ಲಿ ಕುಟುಂಬದವರ ಅಲಕ್ಷದಿಂದ ತೊಂದರೆಗೊಳಗಾಗಿರುವ ಹಿರಿಯ ನಾಗರಿಕರುಗಳ ಸಮಸ್ಯೆಗಳಿಗೆ ಅಧಿಕಾರಿ ವರ್ಗ ಕೂಡಲೇ ಸ್ಪಂದಿಸುವಂತಾಗಬೇಕೆಂದು, ಬೆಂ.ಗ್ರಾ.ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣ ಸಮೀಪದ ಚಂದೇನಹಳ್ಳಿ ಗೇಟ್ ಬಳಿಯ ಸರ್ವೋದಯ ಸೇವಾ ಸಂಸ್ಥೆಯಲ್ಲಿ ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಸರ್ವೋದಯ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ 100 ಕ್ಕೂ ಹೆಚ್ಚು ಮಂದಿ ಹಿರಿಯರು, ಅಂಗವಿಕಲರು, ಬುದ್ದಿಮಾಂದ್ಯರುಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಮಾಸಾಶನ(ಪಿಂಚಣಿ) ಕೂಡಲೇ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು. …

ಹಿರಿಯ ನಾಗರಿಕರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ ಇರಲಿ: ಜಿಲ್ಲಾಧಿಕಾರಿ ಶ್ರೀನಿವಾಸ್ Read More »

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ

ದೇವನಹಳ್ಳಿ: ಗಾಂಧಿಯವರ ಜೀವನವೇ ಒಂದು ಸಂದೇಶ ಹಾಗಾಗೀ ಅವರ ತತ್ವ ಆದರ್ಶ ಉಪದೇಶಗಳನ್ನ ಪಾಲಿಸಿ ಅವರ ಕನಸಿನ “ಗ್ರಾಮಸ್ವರಾಜ್ಯದ” ಬಲಿಷ್ಠ ಭಾರತದ ಪುನರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡಲು ಎವಿವಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿ. ಮಂಜುನಾಥ್ ಕರೆ ನೀಡಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಮಹಾತ್ಮಾ ಗಾಂಧಿಯವರ 152 ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 117 ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ …

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ Read More »

Translate »
Scroll to Top