ರಕ್ತದಾನ ಮಾಡುವದರಿಂದ ಯಾವುದೇ ದೇಹಕ್ಕೆ ಅಡ್ಡ ಪರಿಣಾಮ ಬೀರದು ತಹಶೀಲ್ದಾರ ಎಂ ಸಿದ್ದೇಶ

ಕುಷ್ಟಗಿ, ಅ.೨೩ ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ರಕ್ತದಾನಕ್ಕೆ ಆತಂಕ ಬೇಡಾ ಎಂದು ತಹಶಿಲ್ದಾರ ಎಮ್.ಸಿದ್ದೇಶ ಹೇಳಿದರು.ಅವರು ಇಲ್ಲಿನ ಅಗ್ನಿಶಾಮಕ ಠಾಣೆಯಲ್ಲಿ ತಾಲೂಕು ಗೃಹ ರಕ್ಷಕದಳದ ಮತ್ತು ಅಗ್ನಿಶಾಮಕದಳದವರಿಗೆ ಎರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಬೇರೆ ಬೇರೆ ವಸ್ತುಗಳನ್ನು ಕೃತಕವಾಗಿ, ಅಥವಾ ನೈಸರ್ಗಿಕವಾಗಿ, ಸೃಷ್ಟಿಸಬಹುದು ಆದರೆ ರಕ್ತ ಮಾತ್ರ ಆ ರೀತಿಯಲ್ಲಿ ಸೃಷ್ಟಿಸಲು ಸಾದ್ಯವಿಲ್ಲ. ಕಾರಣ ಪ್ರಸಕ್ತ ದಿನಮಾನಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇದೆ ಈ ದಿನ ಗೃಹ ರಕ್ಷಕರು ಮತ್ತು ಅಗ್ನಿಶಾಮಕ ಸಿಬ್ಬಂದಿಯವರು ರಕ್ತದಾನ ಶಿಬಿರವನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ .ಇನ್ನೂ ಇಂತಹ ಶಿಬಿರಗಳು ನಮ್ಮ ತಾಲೂಕಿನಲ್ಲಿ ನಡೆಯಲಿ ಯುವ ಜನರು ರಕ್ತದಾನಕ್ಕೆ ಮುಂದಾಗಲಿ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಬಿರಾದಾರ ಮಾತನಾಡಿ ಎಲ್ಲಾ ದಾನಗಳಿ ಗಿಂತಲೂ ರಕ್ತದಾನ ಮಹತ್ವದ್ದು ಪ್ರತಿಯೊಬ್ಬರೂ ರಕ್ತದಾನ ಮಾಡಲೂ ಹಿಂಜರಿಕೆ ಬೇಡಾ ಎಂದು ನುಡಿದರು. ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಮಾತನಾಡಿ ಆರೋಗ್ಯದ ದೃಷ್ಟಿಯಿಂದ ರಕ್ತದಾನ ಮಾಡಿದರೆ ದೇಹದಲ್ಲಿನ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಮತ್ತು ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು ಎಂದು ಹೇಳಿದರು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಡಾ.ರವಿಕುಮಾರ್ ದಾನಿ ,ತಾಲೂಕು ಆಸ್ಪತ್ರೆಯ ಹಿರಿಯ ರಕ್ತ ತಪಾಸಕರಾದ ಬಾಲಾಜಿ ಬಳಿಗಾರ.ಮಾತನಾಡಿದರು. ಪ್ರಾಸ್ತಾವಿಕವಾಗಿ ಸೀನಿಯರ್ ಪ್ಲಾಟೂನ್ ಕಮಾಂಡರ್‌ ರವಿಂದ್ರ ಬಾಕಳೆ ಮಾತನಾಡಿ ಮಾನ್ಯ ಡಿ.ಜಿ.ಪಿ.ಅವರ ಆದೇಶದಂತೆ ಜಿಲ್ಲಾ ಸಮಾದೇಷ್ಟರ ಸೂಚನೆಯ ಹಿನ್ನೆಲೆಯಲ್ಲಿ ಗೃಹರಕ್ಷಕರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು.ಕುಷ್ಟಗಿ,ತಾವರಗೇರಿ, ಹನಮಸಾಗರದ, ಗೃಹ ರಕ್ಷಕರು ರಕ್ತದಾನ ಮಾಡಲು ಉತ್ಸುಕರಾಗಿದ್ದಾರೆ ,ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುವುದರಿಂದ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.


ಸ್ವಾಗತವನ್ನು ಅಗ್ನಿಶಾಮಕ ಠಾಣಾಧಿಕಾರಿ ರಾಜು ನೆರವೇರಿಸಿದರು. ವೇದಿಕೆಯ ಮೇಲೆ ಪ್ಲಟೂನ ಕಮಾಂಡರ್ ನಾಗರಾಜ ಬಡಿಗೇರೆ, ಘಟಕಾಧಿಕಾರಿ ಶಿವಪ್ಪ ಚೂರಿ, ತಾವರಗೇರಿ ಘಟಕಾಧಿಕಾರಿ ರವಿಂದ್ರ ಬಳಿಗಾರಹನಮಸಾಗರದ ಹನಮಂತಪ್ಪ ಮಡಿವಾಳ ಉಪಸ್ಥಿತರಿದ್ದು ರಕ್ತದಾನ ಶಿಬಿರ ಯಶಸ್ವಿ ಗೊಳಿಸಿದರು.

Leave a Comment

Your email address will not be published. Required fields are marked *

Translate »
Scroll to Top